Advertisement

ವಿಧಾನಸಭೆ ಚುನಾವಣೆಗೆ ಬಿಜೆಪಿ-ಕಾಂಗ್ರೆಸ್‌ ಸಿದ್ಧತೆ: ಜನೋತ್ಸವ v/s ಜನಜಾಗೃತಿ

01:01 AM Aug 30, 2022 | Team Udayavani |

ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯದಲ್ಲಿ ನಿಧಾನಕ್ಕೆ ಸಿದ್ಧತೆ ಬಿರುಸಾಗುತ್ತಿದೆ. ರಾಜ್ಯದ ಆರು ಸ್ಥಳಗಳಲ್ಲಿ ಬಿಜೆಪಿಯು ಸೆಪ್ಟಂಬರ್‌, ಅಕ್ಟೋಬರ್‌ನಲ್ಲಿ ಜನೋತ್ಸವ ಆಯೋಜಿಸಲಿದೆ. ಈ ಉತ್ಸವಕ್ಕೆ ಇದಿರೇಟು ನೀಡಲು ನಿರ್ಧರಿಸಿರುವ ಕಾಂಗ್ರೆಸ್‌, ಜನಜಾಗೃತಿ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಿದೆ.

Advertisement

ಜನಸಂಪರ್ಕಕ್ಕೆ ಆದ್ಯತೆ
ಬೆಂಗಳೂರು: ರಾಜ್ಯ ಸರಕಾರದ ಸಾಧನೆಯನ್ನು ಜನರಿಗೆ ತಲುಪಿಸುವ ಸಲುವಾಗಿ ಸೆಪ್ಟಂಬರ್‌ ಮತ್ತು ಅಕ್ಟೋಬರ್‌ನಲ್ಲಿ ರಾಜ್ಯದ ಆರು ಸ್ಥಳಗಳಲ್ಲಿ ಜನೋತ್ಸವ ಹಮ್ಮಿ ಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚನೆ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಯವರು ಸೆ. 2ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭ ದಲ್ಲಿ ಪಕ್ಷದ ವತಿಯಿಂದ ನಡೆಯ ಬೇಕಿರುವ ಎಲ್ಲ ಕಾರ್ಯಕ್ರಮಗಳ ಬಗ್ಗೆ ಸುದೀರ್ಘ‌ವಾಗಿ ಚರ್ಚಿಸಿದ್ದೇವೆ. ಬಿ.ಎಸ್‌. ಯಡಿಯೂರಪ್ಪ, ನಳಿನ್‌ ಕುಮಾರ್‌ ಕಟೀಲು, ಅರುಣ್‌ ಸಿಂಗ್‌ ಅವರು ವಿವಿಧ ತಂಡಗಳಲ್ಲಿ ಪ್ರವಾಸ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಜನೋತ್ಸವ ರ್ಯಾಲಿಗಳ ಬಗ್ಗೆಯೂ ಸಮಾಲೋಚನೆ ಮಾಡಲಾಗಿದೆ ಎಂದು ಸೋಮವಾರ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಅನಂತರ ಸುದ್ದಿಗಾರರಿಗೆ ಸಿಎಂ ತಿಳಿಸಿದರು.

ಯಡಿಯೂರಪ್ಪ ಅವರು ಪಕ್ಷದ ಸಂಘಟನೆಯ ಬಗ್ಗೆ ಜೆ.ಪಿ. ನಡ್ಡಾ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿ ಯಾಗಿ ಮಾತುಕತೆ ನಡೆಸಿ¨ªಾರೆ. ಅಲ್ಲಿಯ ಮಾತುಕತೆ, ಸೂಚನೆಯ ಬಗ್ಗೆ ವಿವರವಾಗಿ ಚರ್ಚೆ ಮಾಡಿದ್ದೇವೆ. ಬರುವ ದಿನಗಳಲ್ಲಿ ಇನ್ನೊಂದು ಸಭೆ ಯನ್ನು ರಾಜ್ಯ ಮಟ್ಟದ ಹಿರಿಯ ನಾಯಕರೊಂದಿಗೆ ನಡೆಸಿ, ಸೆಪ್ಟಂಬರ್‌ ಮತ್ತು ಅಕ್ಟೋಬರ್‌ ತಿಂಗಳ ಕಾರ್ಯ ಕ್ರಮದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ನಿರ್ಣಯ ತೆಗೆದು ಕೊಳ್ಳಲಾಗಿದೆ ಎಂದು ತಿಳಿಸಿದರು.

ಸೆ. 8ರಂದು ದೊಡ್ಡ ಬಳ್ಳಾಪುರ ದಲ್ಲಿ ನಡೆಯುವ ಜನೋತ್ಸವ ಕಾರ್ಯಕ್ರಮದ ಬಗ್ಗೆ ಜೆ.ಪಿ. ನಡ್ಡಾ ಮಾಹಿತಿ ಪಡೆದಿದ್ದಾರೆ. ಅದನ್ನು ಯಶಸ್ವಿಗೊಳಿ ಸಲು ಕೆಲವು ಸೂಚನೆಗಳನ್ನು ನೀಡಿದ್ದಾರೆ. ಅದನ್ನು ಕಾರ್ಯಗತಗೊಳಿ ಸಲು ಸಂಘಟಕರಿಗೆ ತಿಳಿಸ ಲಾಗಿದೆ. ಸಚಿವ ಡಾ| ಸುಧಾಕರ್‌, ಶಾಸಕರು, ಪದಾಧಿಕಾರಿಗಳು ಎಲ್ಲರೂ ಸೇರಿ ಜನೋತ್ಸವವನ್ನು ಯಶಸ್ವಿಗೊಳಿಸುತ್ತೇವೆ ಎಂದರು.

Advertisement

- ಆರು ಸ್ಥಳಗಳಲ್ಲಿ ಜನೋತ್ಸವ: ಸಿಎಂ
-ಮುಖಂಡರ ರಾಜ್ಯ ಪ್ರವಾಸದ ಬಗ್ಗೆ ಚರ್ಚೆ
-ಮತ್ತೊಮ್ಮೆ ಸಭೆ ನಡೆಸಿ ಮುಂದಿನ ಎರಡು ತಿಂಗಳ ಕಾರ್ಯಕ್ರಮಕ್ಕೆ ಅಂತಿಮ ಸ್ಪರ್ಶ

ಕಾಂಗ್ರೆಸ್‌ ಉತ್ತರ ಜನಜಾಗೃತಿ
ಬೆಂಗಳೂರು: ಬಿಜೆಪಿಯ “ಜನೋತ್ಸವ’ಕ್ಕೆ ತಿರುಗೇಟು ನೀಡಲು ಕಾಂಗ್ರೆಸ್‌ “ಜನಜಾಗೃತಿ’ ಸಮಾವೇಶ ನಡೆಸಲು ಚಿಂತನೆ ನಡೆಸಿದೆ. ಕಾಂಗ್ರೆಸ್‌ ಮುಖಂಡರಾದ ರಣದೀಪ್‌ ಸಿಂಗ್‌ ಸುಜೇìವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್‌ ಈ ಬಗ್ಗೆ ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ.

ಜತೆಗೆ ರಾಜ್ಯ ಬಿಜೆಪಿ ಸರಕಾರ ಚುನಾವಣೆ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿದ್ದು, ಶೇ. 10 ರಷ್ಟನ್ನೂ ಈಡೇರಿಸಿಲ್ಲ ಎಂದಿದ್ದಾರೆ.ಅದಕ್ಕಾಗಿ ಸಾಮಾಜಿಕ ಜಾಲತಾಣ ಗಳಲ್ಲಿ “ಇದೆಯೇ ನಿಮ್ಮ ಬಳಿ ಉತ್ತರ’ ಎಂಬ ಆಂದೋಲನ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಯಡಿಯೂರಪ್ಪನವರು ಪ್ರಣಾ ಳಿಕೆಯಲ್ಲಿ “ಕರ್ನಾಟಕದ ಮುಂದೆ ನಮ್ಮ ವಚನ’ ಎಂದಿದ್ದರು. ನಾವು ಸರಕಾರಕ್ಕೆ ಸಾಮಾಜಿಕ ಜಾಲ ತಾಣಗಳ ಮೂಲಕ, “ಬಿಜೆಪಿಯವರೇ ಕೊಟ್ಟ ವಚನ ಉಳಿಸಿ ಕೊಂಡಿದ್ದೀರಾ’ ಎಂದು ಕೇಳುತ್ತಿದ್ದೇವೆ. “ನಮ್ಮ ಪ್ರಶ್ನೆಗಳಿಗೆ ನಿಮ್ಮ ಹತ್ತಿರ ಇದೆಯೇ ಉತ್ತರ’ ಎಂಬ ಆಂದೋಲನ ಮಾಡು ತ್ತೇವೆ ಎಂದರು.

ಬಿಜೆಪಿ ಸರಕಾರ ತನ್ನ ಆಡಳಿತ ಅವಧಿಯಲ್ಲಿ ನೀಡಿರುವ ಕೊಡುಗೆ ಗಳೆಂದರೆ ಮಠಗಳಿಂದ ಶೇ. 30, ಗುತ್ತಿಗೆದಾರರಿಂದ ಶೇ. 40, ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಿಂದ ಶೇ. 60ರಷ್ಟು ಕಮಿಷನ್‌ ಪಡೆದಿರುವುದು. ಸರಕಾರದ ವೈಫ‌ಲ್ಯಗಳನ್ನು ಜನ ಜಾಗೃತಿ ಸಮಾವೇಶಗಳ ಮೂಲಕ ವಿವರಿಸುತ್ತೇವೆ ಎಂದರು.

ಆಂದೋಲನದ ಭಾಗವಾಗಿ ಶೇ. 90 ವಚನ ವಂಚನೆ ಘೋಷವಾಕ್ಯದ ಪೋಸ್ಟರ್‌ ಬಿಡುಗಡೆಗೊಳಿಸಿದರು.

ವಚನ ವಂಚನೆ
ಜನರಿಗೆ ಮಾತು ಕೊಟ್ಟ ಅನಂತರ ಅದರಂತೆ ನಡೆಯಬೇಕು. ಆದರೆ ಈ ಸರಕಾರ ಕೊಟ್ಟ ಮಾತಿಗೆ ತಪ್ಪಿ ಜನರ ನಂಬಿಕೆಗೆ ದ್ರೋಹ ಎಸಗಿದೆ. ಹಾಗಾಗಿ ಇದು ವಚನ ವಂಚನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಕಳೆದ ಚುನಾವಣೆಯಲ್ಲಿನ ಬಿಜೆ ಪಿಯ ಪ್ರಣಾಳಿಕೆಯನ್ನೇ ಜನರಿಗೆ ವಿವರಿಸಿ ವಚನ ವಂಚನೆಯಾಗಿರುವುದನ್ನು ತಿಳಿಸುತ್ತೇವೆ ಎಂದು ಡಿ.ಕೆ. ಶಿವ ಕುಮಾರ್‌ ಹೇಳಿದರು.

-ಕೊಟ್ಟದ್ದು 600 ಭರವಸೆ, ಈಡೇರಿಸಿದ್ದು ಶೇ. 10
-ಜಾಲತಾಣಗಳಲ್ಲಿ ಆಂದೋಲನಕ್ಕೆ ನಿರ್ಧಾರ
-ಕಮಿಷನ್‌ ಪಡೆದದ್ದೇ ಬಿಜೆಪಿ ಸರಕಾರದ ಸಾಧನೆ

 

Advertisement

Udayavani is now on Telegram. Click here to join our channel and stay updated with the latest news.

Next