Advertisement

ಮೆಹುಲ್‌ ಚೋಕ್ಸಿ ಲಾಯರ್‌ಗೆ ಕಾಂಗ್ರೆಸ್‌ ಟಿಕೆಟ್‌ ಏಕೆ? BJP ಪ್ರಶ್ನೆ

05:51 PM Apr 17, 2018 | udayavani editorial |

ಬೆಂಗಳೂರು : ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 13,000 ಕೋಟಿ ರೂ. ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್‌ ಮೋದಿಯ ಚಿಕ್ಕಪ್ಪ ಮೆಹುಲ್‌ ಚೋಕ್ಸಿ ಯ ವಕೀಲ ಎಚ್‌ ಎಸ್‌ ಚಂದ್ರಮೌಳಿಗೆ ಅವರಿಗೆ ಮಡಿಕೇರಿ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿರುವುದನ್ನು ಬಿಜೆಪಿ ಪ್ರಶ್ನಿಸಿದೆ. 

Advertisement

2016ರ ವಂಚನೆ ಪ್ರಕರಣದಲ್ಲಿ ವಕೀಲ ಚಂದ್ರಮೌಳಿ ಅವರು ರಾಜ್ಯ ಹೈಕೋರ್ಟಿನಲ್ಲಿ  ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿಯನ್ನು ಪ್ರತಿನಿಧಿಸಿದ್ದುದನ್ನು ಬಿಜೆಪಿ ಉಲ್ಲೇಖೀಸಿದೆ.

ಬಿಜೆಪಿಯ ರಾಷ್ಟ್ರೀಯ ಮತ್ತು ತಂತ್ರಜ್ಞಾನ ವಿಭಾಗದ ಪ್ರಭಾರಿ ಅಮಿತ್‌ ಮಾಳವೀಯ ಅವರು ಟ್ವಿಟರ್‌ನಲ್ಲಿ  ಹ್ಯಾಶ್‌ ಟ್ಯಾಗ್‌  ಕಾಂಗ್ರೆಸ್‌ ವಿತ್‌ ನೀರವ್‌ ಬಳಸಿಕೊಂಡು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಾನೂನು ಸಲಹೆಗಾರ ಮತ್ತು ಪಕ್ಷದ ವಕ್ತಾರ ಬೃಜೇಶ್‌ ಕಾಳಪ್ಪ ಅವರು ಮಡಿಕೇರಿಯವರೇ ಆಗಿದ್ದು  ಅವರಿಗೆ ಅಲ್ಲಿ ಸ್ಪರ್ಧಿಸಲು ಟಿಕೆಟ್‌ ಕೊಡದೆ ವಕೀಲ ಚಂದ್ರಮೌಳಿಗೆ ಟಿಕೆಟ್‌ ಕೊಟ್ಟಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next