Advertisement

ರಸ್ತೆಯ ಹಂಪ್ಸ್‌ಗಳಿಗೆ ಬಣ್ಣಬಳಿದ ಬಿರುವೆರ್‌ ಕುಡ್ಲ ಮಹಿಳಾ ವೇದಿಕೆ ಸದಸ್ಯೆಯರು

09:41 PM Sep 26, 2021 | Team Udayavani |

ಮಹಾನಗರ: ಮಂಗಳೂರಿನ ಅನೇಕ ಕಡೆಗಳಲ್ಲಿ ರಸ್ತೆ ಹಂಪ್ಸ್‌ಗಳಿಗೆ ಬಳಿದಿರುವ ಬಣ್ಣ ಮಾಸಿದ್ದು, ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದ್ದು, ಇದನ್ನು ಮನಗಂಡ ಫ್ರೆಂಡ್ಸ್‌ ಬಲ್ಲಾಳ್‌ಬಾಗ್‌ ಬಿರುವೆರ್‌ ಕುಡ್ಲ ಮಹಿಳಾ ವೇದಿಕೆಯ ಅಶೋಕನಗರ ತಂಡದ ಸದಸ್ಯೆಯರು ಬಣ್ಣ ಮಾಸಿದ ಹಂಪ್ಸ್‌ಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಿದ್ದಾರೆ.

Advertisement

ಶನಿವಾರ ರಾತ್ರಿ ಸುಮಾರು 10 ಗಂಟೆಯಿಂದ ಬೆಳಗ್ಗಿನ ಜಾವ ಸುಮಾರು 3.15ರ ವರೆಗೆ ನಗರದ ಲೇಡಿಹಿಲ್‌ನಿಂದ ಉರ್ವಸ್ಟೋರ್‌ ಬಸ್‌ ನಿಲ್ದಾಣದವರೆಗೆ ಸುಮಾರು 9 ಕಡೆಗಳಲ್ಲಿ ಮಹಿಳಾ ವೇದಿಕೆಯ 15 ಮಂದಿ ಸದಸ್ಯೆಯರು ಹಂಪ್ಸ್‌ಗಳಿಗೆ ಬಣ್ಣ ಬಳಿದಿದ್ದಾರೆ. ಇವರ ಈ ಕೆಲಸಕ್ಕೆ ಬಿರುವೆರ್‌ ಕುಡ್ಲ ಸಂಘಟನೆಯ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ, ಉದ್ಯಮಿ ಸಚಿನ್‌, ಕೇಂದ್ರೀಯ ಸಮಿತಿ ಸದಸ್ಯರು ಉರ್ವ ಪೊಲೀಸ್‌ ಠಾಣೆ ಸಿಬಂದಿ ಸಾಥ್‌ ನೀಡಿದ್ದಾರೆ.”ಬಣ್ಣ ಕಳೆದುಕೊಂಡಿವೆ ಝೀಬ್ರಾ ಕ್ರಾಸ್‌, ಹಂಪ್ಸ್‌’ ಎಂಬ ಬಗ್ಗೆ ಉದಯವಾಣಿ ಸುದಿನವು ಇತ್ತೀಚೆಗೆ ವರದಿ ಪ್ರಕಟಿಸಿತ್ತು.

ಇದನ್ನೂ ಓದಿ:ಜೆಡಿಎಸ್‌ ಹೆಸರಿಗಷ್ಟೇ ಜಾತ್ಯತೀತ, ಅವರದ್ದು ಅವಕಾಶವಾದಿ ರಾಜಕಾರಣ : ಸಿದ್ದರಾಮಯ್ಯ

ವಾಹನ ಅಪಘಾತ ತಪ್ಪಿಸಲು
ಬಿರುವೆರ್‌ ಕುಡ್ಲ ಮಹಿಳಾ ವೇದಿಕೆಯ ಅಶೋಕನಗರ ವಲಯ ಸಂಘಟಕಿ ಸುಮಂಗಲಾ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ನಗರದ ಕೆಲವೊಂದು ರಸ್ತೆ ಉಬ್ಬುಗಳಲ್ಲಿ ಬಣ್ಣ ಮಾಸಿದ್ದು, ಹಂಪ್ಸ್‌ ಇರುವುದು ತಿಳಿಯದೆ ಕೆಲವು ದಿನಗಳ ಹಿಂದೆ ವಾಹನವೊಂದು ಸ್ಕಿಡ್‌ ಆಗಿತ್ತು. ಇದನ್ನು ಮನಗಂಡು ನಮ್ಮ ಸಂಘಟನೆಯ ಪ್ರಮುಖರು, ಮಹಿಳಾ ವೇದಿಕೆಯ ಸದಸ್ಯರು ಚರ್ಚೆ ನಡೆಸಿ ಹಂಪ್ಸ್‌ಗಳಿಗೆ ಬಣ್ಣ ಬಳಿಯುವ ಕೆಲಸ ನಿರ್ವಹಿಸಿದೆವು’ ಎನ್ನುತ್ತಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next