Advertisement

ಜೈವಿಕ ಭೌತಶಾಸ್ತ್ರ ಕಾರ್ಯಾಗಾರ ಉದ್ಘಾಟನೆ

12:15 PM Oct 31, 2018 | Team Udayavani |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜೀವ ವಿಜ್ಞಾನ ಮತ್ತು ಭೌತಶಾಸ್ತ್ರ ವಿಭಾಗದಿಂದ ಜ್ಞಾನಭಾರತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಜೈವಿಕ ಭೌತಶಾಸ್ತ್ರದ ವಿಷಯದ ಐದು ದಿನಗಳ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ಸಿಕ್ಕಿದೆ.

Advertisement

ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಮಾತನಾಡಿ, ಭೌತಶಾಸ್ತ್ರ ಹಾಗೂ ಜೀವ ವಿಜ್ಞಾನದ ಪರಾವಲಂಬನೆ ವಿವರಿಸಿದರು. ವಿಜ್ಞಾನ ಬೆಳೆಸುವಲ್ಲಿ ಯುವ ಜನತೆಯ ಪಾತ್ರ ಹೆಚ್ಚಿದೆ. ಯುವಜನತೆ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಬೇಕಾದ ವಾತಾರಣ ನಿರ್ಮಿಸಬೇಕು ಎಂದರು.

ಭಾರತೀಯ ವಿಜ್ಞಾನ ಸಂಸ್ಥೆಯ ಅಣು ಜೈವಿಕ ಭೌತಶಾಸ್ತ್ರ  ವಿಭಾಗದ ಪ್ರೊ.ಎಂ.ಆರ್‌.ಎನ್‌. ಮೂರ್ತಿ ಮಾತನಾಡಿ, ಕ್ಷ-ಕಿರಣ, ಸ್ಪಟಿಕಶಾಸ್ತ್ರ ಹಾಗೂ ಪ್ರೋಟೀನ್‌ ರೂಪು ರಚನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಂಪ್ಯೂಟೇಷನ್‌ ಅಂಡ್‌ ಡಾಟಾ ಸೈನ್ಸ್‌ ವಿಭಾಗದ ಪ್ರೊ.ಕೆ.ಶೇಖರ್‌, ಜೈವಿಕ ಭೌತಶಾಸ್ತ್ರದ ಪ್ರಾಧ್ಯಾಪಕರಾದ ಪ್ರೊ.ಎನ್‌. ನಾಗಯ್ಯ, ಪ್ರೊ.ಎಚ್‌.ಪಿ. ಪುಟ್ಟರಾಜು ಹಾಗೂ ಡಾ.ರವಿ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next