Advertisement

Moodbidre: ರಾಮಮಂದಿರದಲ್ಲಿ ಬಿಂಬ ಪ್ರತಿಷ್ಠೆ- ಭಟ್ಟಾರಕರಿಗೆ ಆಹ್ವಾನ

12:16 AM Dec 22, 2023 | Team Udayavani |

ಮೂಡುಬಿದಿರೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ. 22ರಂದು ನಡೆಯಲಿರುವ ಶ್ರೀರಾಮ ಬಿಂಬ ಪ್ರಾಣ ಪ್ರತಿಷ್ಠೆಯ ಸಂದರ್ಭ ಉಪಸ್ಥಿತರಿರುವಂತೆ ಮೂಡುಬಿದಿರೆ ಶ್ರೀ ಜೈನಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರನ್ನು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಸಮಿತಿ ಅಧಿಕೃತವಾಗಿ ಆಹ್ವಾನಿಸಿದೆ.

Advertisement

ಅ. 29ರಂದು ಭಟ್ಟಾರಕ ಸ್ವಾಮೀಜಿಯವರು ಅಯೋಧ್ಯೆಗೆ ಭೇಟಿ ನೀಡಿದ್ದಾಗ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಆಧ್ಯಕ್ಷ ಗೋಪಾಲದಾಸ್‌ಜೀ ರಾಮಮಂದಿರ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು ಎಂದು ಭಟ್ಟಾರಕರನ್ನು ಮೌಖೀಕವಾಗಿ ಆಹ್ವಾನಿಸಿದ್ದರು. ಇದೀಗ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪಟ್‌ರಾಯ್‌ ಡಿ. 14ರಂದು ರವಾನಿಸಿರುವ ಕೋರಿಕೆ ಪತ್ರ ತಲುಪಿದೆ ಎಂದು ಶ್ರೀ ಜೈನಮಠದ ವ್ಯವಸ್ಥಾಪಕ ಸಂಜಯಂತ ಕುಮಾರ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next