Advertisement
ಹಳೆಯಂಗಡಿ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಮೂಲ್ಕಿ ಇನ್ಸ್ಪೆಕ್ಟರ್ ಶ್ರೀಕಾಂತ್ ಕೆ. ಮತ್ತು ಸಿಬಂದಿ ಉಡುಪಿಯಿಂದ ಬರುತ್ತಿದ್ದ ಬೈಕ್ನಲ್ಲಿ ಬರುತ್ತಿದ್ದ ಕುತ್ತೆತ್ತೂರಿನ ನಡುಕೆರೆ ಮನೆಯ ನಿತ್ಯಾನಂದ ಶೆಟ್ಟಿ ಹಾಗೂ ಸುರತ್ಕಲ್ ಇಂದ್ರಾಕಟ್ಟಾ ಪೆಟ್ರೋಲ್ ಬಳಿಯ ಅರುಣ್ ಪೂಜಾರಿ ಅವರನ್ನು ತಡೆದು ದಾಖಲೆ ಪತ್ರ ಕೇಳಿದರು. ಅದನ್ನು ನೀಡಲು ವಿಫಲರಾಗಿ ತಡವರಿಸಿದ ಅವರನ್ನು ತೀವ್ರ ತನಿಖೆಗೆ ಒಳಪಡಿಸಿದಾಗ ಆ ವಾಹನವನ್ನು ಮಂಗಳೂರಿನ ದ್ವಾರಕಾ ನಗರದಿಂದ ಕಳವು ಮಾಡಿರುವುದಾಗಿ ತಿಳಿದು ಬಂತು. ಬಳಿಕ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದಾಗ ಮತ್ತಷ್ಟು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಗಳಾಗಿರುವುದು ತಿಳಿದು ಬಂತು.ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Advertisement
ದ್ವಿಚಕ್ರ ವಾಹನ ಕಳವು: ಇಬ್ಬರ ಸೆರೆ
06:00 AM Apr 05, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.