Advertisement

ದ್ವಿಚಕ್ರ ವಾಹನ ಕಳವು: ಇಬ್ಬರ ಸೆರೆ

06:00 AM Apr 05, 2018 | Team Udayavani |

ಮೂಲ್ಕಿ: ಮಂಗಳೂರಿನ ಉರ್ವ, ಕಾವೂರು, ಉಡುಪಿ ಜಿಲ್ಲೆಯ ಪಡುಬಿದ್ರಿ ಹಾಗೂ ಇತರ ಕಡೆಗಳಲ್ಲಿ ದ್ವಿಚಕ್ರ ವಾಹನ ಕದ್ದಿರುವ ಆರೋಪದಲ್ಲಿ  ಇಬ್ಬರನ್ನು ಮೂಲ್ಕಿ ಪೊಲೀಸರು ಬಂಧಿಸಿ, ಏಳು ಹೋಂಡಾ  ಸ್ಪೆಂಡರ್‌  ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಹಳೆಯಂಗಡಿ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಮೂಲ್ಕಿ ಇನ್ಸ್‌ಪೆಕ್ಟರ್‌  ಶ್ರೀಕಾಂತ್‌ ಕೆ. ಮತ್ತು ಸಿಬಂದಿ ಉಡುಪಿಯಿಂದ ಬರುತ್ತಿದ್ದ ಬೈಕ್‌ನಲ್ಲಿ ಬರುತ್ತಿದ್ದ  ಕುತ್ತೆತ್ತೂರಿನ ನಡುಕೆರೆ ಮನೆಯ ನಿತ್ಯಾನಂದ ಶೆಟ್ಟಿ ಹಾಗೂ ಸುರತ್ಕಲ್‌ ಇಂದ್ರಾಕಟ್ಟಾ ಪೆಟ್ರೋಲ್‌ ಬಳಿಯ ಅರುಣ್‌ ಪೂಜಾರಿ  ಅವರನ್ನು  ತಡೆದು  ದಾಖಲೆ ಪತ್ರ ಕೇಳಿದರು. ಅದನ್ನು  ನೀಡಲು ವಿಫ‌ಲರಾಗಿ ತಡವರಿಸಿದ  ಅವರನ್ನು ತೀವ್ರ ತನಿಖೆಗೆ ಒಳಪಡಿಸಿದಾಗ ಆ ವಾಹನವನ್ನು  ಮಂಗಳೂರಿನ  ದ್ವಾರಕಾ ನಗರದಿಂದ ಕಳವು ಮಾಡಿರುವುದಾಗಿ  ತಿಳಿದು ಬಂತು. ಬಳಿಕ ಅವರನ್ನು  ವಶಕ್ಕೆ ಪಡೆದು ತನಿಖೆ ಮುಂದುವರಿಸಿದಾಗ  ಮತ್ತಷ್ಟು  ಪ್ರಕರಣಗಳಲ್ಲಿ ಆರೋಪಿಗಳು ಭಾಗಿಗಳಾಗಿರುವುದು ತಿಳಿದು ಬಂತು.ಆರೋಪಿಗಳನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಮಿಷನರ್‌ ಟಿ. ಆರ್‌. ಸುರೇಶ್‌  ಮಾರ್ಗದರ್ಶನ, ಡಿಸಿಪಿಗಳಾದ ಹನುಮಂತರಾಯ ಹಾಗೂ ಉಮಾ ಪ್ರಶಾಂತ್‌ ಅವರ ನಿರ್ದೇಶನದಲ್ಲಿ ಪಣಂಬೂರು ಸಹಾಯಕ ಆಯುಕ್ತ ರಾಜೇಂದ್ರ  ನೇತೃತ್ವದಲ್ಲಿ ಮೂಲ್ಕಿ ಇನ್ಸ್‌ ಪೆಕ್ಟರ್‌  ಶ್ರೀಕಾಂತ್‌ ಕೆ., ಎಸ್ಸೆ„ ಶೀತಲ್‌ ಅಲಗೂರು, ಎಎಸ್ಸೆ„  ಚಂದ್ರಶೇಖರ್‌,  ಸಿಬಂದಿ ವರ್ಗದ ಧರ್ಮೇಂದ್ರ, ಅಣ್ಣಪ್ಪ, ಸುರೇಶ್‌, ಮಹಮ್ಮದ್‌ ಹುಸೈನ್‌, ಬಸವರಾಜ್‌ ಮತ್ತು ಮನೋಜ್‌ ಕುಮಾರ್‌   ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next