Advertisement

Udupi; ಕೆಲಸ ಮಾಡುತ್ತಿದ್ದ ಸಂಸ್ಥೆಗೆ ವಂಚನೆ

12:36 AM Apr 07, 2024 | Team Udayavani |

ಉಡುಪಿ: ದ್ವಿಚಕ್ರ ವಾಹನ ಸಂಸ್ಥೆಯೊಂದರಲ್ಲಿ ಮಾರಾಟ ವಿಭಾಗದ ಮ್ಯಾನೇಜರ್‌ ಹಾಗೂ ಮಾರಾಟ ಪ್ರತಿನಿಧಿಯಾಗಿದ್ದ ರೋಶನ್‌ ಎಂಬಾತ ಸಂಸ್ಥೆಗೆ ವಂಚಿಸಿದ ಘಟನೆ ನಡೆದಿದೆ.

Advertisement

ಈತ ಕಳೆದ ತಿಂಗಳಿನಲ್ಲಿ ಕೆಲಸಕ್ಕೆ ಬಾರದೆ ಅನಾರೋಗ್ಯ ಕಾರಣ ಹೇಳಿ ಗೈರು ಹಾಜರಾಗುತ್ತಿದ್ದ. ಕೆಲಸಕ್ಕೆ ಬಾರದೆ, ಫೋನ್‌ ಸಂಪರ್ಕಕ್ಕೆ ಸಿಗದಿರುವ ಕಾರಣದಿಂದ ಅನುಮಾನಗೊಂಡು ಸಂಸ್ಥೆಯ ಮಾರಾಟದ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಿದಾಗ 2024ರ ಜನವರಿಯಿಂದ ಮಾರ್ಚ್‌ವರೆಗೆ 18,14,750 ರೂ.ನಷ್ಟು ಹಣವನ್ನು ಗ್ರಾಹಕರಿಂದ ತನ್ನ ಸ್ವಂತ ಖಾತೆಗೆ ವರ್ಗಾಯಿಸಿಕೊಂಡು ಹಾಗೂ ಆ ಹಣವನ್ನು ದುರುಪಯೋಗಪಡಿಸಿಕೊಂಡು ಸಂಸ್ಥೆಗೆ ದ್ರೋಹ ಎಸಗಿದ್ದಾನೆ ಎಂದು ಸಂಸ್ಥೆಯ ಮ್ಯಾನೇಜರ್‌ ಶರತ್‌ ಟಿ.ಅವರು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next