Advertisement

Udupi; ಬನ್ನಂಜೆ: ದ್ವಿಚಕ್ರ ವಾಹನ ಕಳವು; ಪ್ರಕರಣ ದಾಖಲು

01:12 AM Apr 02, 2024 | Team Udayavani |

ಉಡುಪಿ: ಬನ್ನಂಜೆಯ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾದ ಘಟನೆ ನಡೆದಿದೆ. ತೆಂಕನಿಡಿಯೂರಿನ ಪುನೀತ್‌ ಕುಮಾರ್‌ ಅವರು 2 ವರ್ಷಗಳಿಂದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.

Advertisement

ಕಂಪೆನಿ ವತಿಯಿಂದ ಇವರಿಗೆ ದ್ವಿಚಕ್ರ ವಾಹನ ನೀಡಲಾಗಿತ್ತು. ಅದನ್ನು ಮಾ.30ರಂದು ಬನ್ನಂಜೆ ಬಳಿಯಿರುವ ಕಟ್ಟಡವೊಂದರ ಎದುರು ನಿಲ್ಲಿಸಿದ್ದರು. ಮರುದಿನ ನೋಡಿದಾಗ ಬೈಕ್‌ ಕಳವಾಗಿತ್ತು.

ಬೈಕ್‌ ಮೌಲ್ಯ 20 ಸಾವಿರ ರೂ.ಎಂದು ಅಂದಾಜಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next