Advertisement

ಪಟ್ನಾ ನಿವಾಸದಲ್ಲಿ ನಿವೃತ್ತ ಕಮಿಷನರ್‌,ಪತ್ನಿ ಕೊಲೆ;ನಾಲ್ವರು ವಶಕ್ಕೆ

10:52 AM Sep 07, 2018 | Team Udayavani |

ಪಟ್ನಾ : ನೀರಾವರಿ ಇಲಾಖೆಯ ನಿವೃತ್ತ ಆಯುಕ್ತ,  82ರ ಹರೆಯದ ಹರೇಂದ್ರ ಪ್ರಸಾದ್‌ ಮತ್ತು ಅವರ ಪತ್ನಿ ಸಾಧನಾ ದಾಸ್‌ ಗುಪ್ತಾ ಅವರು ನಗರದ ಬುದ್ಧ ಕಾಲಿನಿಯಲ್ಲಿನ ತಮ್ಮ ನಿವಾಸದ ಡ್ರಾಯಿಂಗ್‌ ರೂಮಲ್ಲಿ ನಿಗೂಢ ಸನ್ನಿವೇಶದಲ್ಲಿ ಸತ್ತು ಬಿದ್ದಿರುವುದು ನಿನ್ನೆ ಗುರುವಾರ ತಡರಾತ್ರಿ ಪತ್ತೆಯಾಗಿದೆ.

Advertisement

ಮೇಲ್ನೋಟಕ್ಕೆ ಇದು ಶಂಕಿತ ಕೊಲೆಯಂತೆ ಕಂಡು ಬರುತ್ತಿದೆ; ಎರಡೂ ಮೃತ ದೇಹಗಳ ಮೇಲೆ ಗಾಯಗಳು ಕಂಡುಬಂದಿವೆ. ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಲ್ಲಿ ಚಾಲಕ ಮತ್ತು ಮನೆ ಕೆಲಸದಾಕೆ ಸೇರಿದ್ದಾರೆ ಎಂದು ಎಸ್‌ಎಸ್‌ಪಿ ಮನು ಮಹಾರಾಜ್‌ ಹೇಳಿದ್ದಾರೆ.

ಮನೆಯ ಡ್ರಾಯಿಂಗ್‌ ರೂಮಲ್ಲಿ ಬಿದ್ದಿದ್ದ ದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾದಾಗ ವೈದ್ಯರು ಅದಾಗಲೇ ಸಾವು ಸಂಭವಿಸಿದ್ದಾಗಿ ಹೇಳಿದ್ದಾರೆ. 

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಯ ನಿಗೂಢತೆಯನ್ನು ತಾವು ಬೇಗನೆ ಭೇದಿಸುವುದಾಗಿ ಪೊಲಿಸರು ಹೇಳಿದ್ದಾರೆ. 

ಸಂಬಂಧಿಕರನ್ನು ಕೂಡ ಪ್ರಶ್ನಿಸಲಾಗುತ್ತಿದ್ದು ಕೇಸಿನ ವಿವರಗಳನ್ನು ಕಲೆ ಹಾಕಲಾಗುತ್ತಿದೆ. ಈ ಅವಳಿ ಸಾವು ಕಾಲನಿಯ ನಿವಾಸಿಗಳಲ್ಲಿ ಭಯ, ಆತಂಕ ಸೃಷ್ಟಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next