Advertisement

BBK11: ಬಿಗ್‌ಬಾಸ್‌ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಕಾಮಿಡಿಯನ್‌ ಧನರಾಜ್; ಅಂಥದ್ದೇನಾಯ್ತು

05:20 PM Oct 02, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ-11 (Bigg Boss Kannda-11) ಆರಂಭವಾಗಿ ಎರಡು ದಿನ ಕಳೆದಿದೆ ಅಷ್ಟೇ. ಆದರೆ ಸ್ಪರ್ಧಿಗಳ ನಡುವಿನ ಟಾಕ್‌ ಫೈಟ್‌ ತಾರಕಕ್ಕೇರಿದೆ.

Advertisement

ಎರಡು ದಿನಗಳ ದೊಡ್ಮನೆ ಆಟದಲ್ಲಿ ಸ್ವರ್ಗ ಹಾಗೂ ನರಕದ ನಿವಾಸಿಗಳು ಪರಸ್ಪರ ಆರೋಪ – ಪ್ರತ್ಯಾರೋಪ ಮಾಡುತ್ತಿದ್ದಾರೆ. ನಾಮಿನೇಷನ್‌ ಪ್ರಕ್ರಿಯೆಗಳು ನಡೆದಿದ್ದು, ಕೆಲ ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ.

ಜಗದೀಶ್, ಯಮುನಾ, ಮಂಜು, ಹಂಸಾ, ಭವ್ಯಾ ನಾಮಿನೇಟ್ ಆಗಿದ್ದು, ಶಿಶಿರ್, ಮಾನಸ, ಮೋಕ್ಷಿತಾ ಟಾಸ್ಕ್ ನಲ್ಲಿ ಸೋತ ಕಾರಣ ನೇರವಾಗಿ ನಾಮಿನೇಟ್ ಆಗಿದ್ದಾರೆ. ಚೈತ್ರಾ ಕುಂದಾಪುರ ಮೊದಲೇ ನಾಮಿನೇಟ್ ಆಗಿದ್ದಾರೆ.

ಇದನ್ನೂ ಓದಿ: Kollywood: ಮೂವರು ಗಂಡಂದಿರಿಗೆ ವಿಚ್ಚೇದನ ಕೊಟ್ಟು 4ನೇ ಮದುವೆಗೆ ಸಜ್ಜಾದ ಖ್ಯಾತ ನಟಿ

ನಾಮಿನೇಷನ್‌ ಪ್ರಕ್ರಿಯೆಯಿಂದ ಪಾರಾಗಲು ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಹೊಸ ಟಾಸ್ಕ್‌ ನೀಡಿದ್ದಾರೆ. ಈ ಟಾಸ್ಕ್‌ನ ಉಸ್ತುವಾರಿಯನ್ನು ಧನರಾಜ್‌ (Dhanraj Achar) ವಹಿಸಿಕೊಂಡಿದ್ದಾರೆ. ಟಾಸ್ಕ್‌ ಮಾಡುವಾಗ ಜಗದೀಶ್‌ ಅವರ ಮೈ ತಾಗಿ ಒಬ್ಬ ಮಹಿಳಾ ಸ್ಪರ್ಧಿ ಕೆಳಗೆ ಬಿದ್ದಿದ್ದಾರೆ. ಇದನ್ನು ಧನರಾಜ್‌ ಅವರು ಇದು ಗಣನೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಜಗದೀಶ್‌ ಅವರು ಅಸಮಾಧಾನಗೊಂಡು ನೀವು ರೆಫ್ರಿ ನಿಲ್ಲೋಕೆ ಲಾಯಕ್ಕಿಲ್ಲ ಎಂದಿದ್ದಾರೆ. ಇದಕ್ಕೆ ಧನರಾಜ್‌ ಅವರು ಗರಂ ಆಗಿದ್ದು ನೀವ್ಯಾರು ಹೇಳೋಕೆ ಎಂದು ರೋಷಾವೇಷ ತಾಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

Advertisement

ಇನ್ನೊಂದು ಪ್ರೋಮೊದಲ್ಲಿ ಧನರಾಜ್‌ ಅವರು ಬಿಗ್‌ ಬಾಸ್‌ ಬಳಿ ಬಂದು ಭಾವುಕರಾಗಿರುವುದನ್ನು ತೋರಿಸಲಾಗಿದೆ.  ನಾನು ಕಾನ್ಫಿಡೆನ್ಸ್ ಕಳೆದುಕೊಳ್ಳುತ್ತಿದ್ದೀನಿ ಬಿಗ್‌ ಬಾಸ್.‌ ಕಷ್ಟ ಅನ್ನಿಸುತ್ತಿದೆ ಬಿಗ್‌ ಬಾಸ್.‌ ಕೊಟ್ಟಿರುವ ಟಾಸ್ಕ್‌ ಸರಿಯಾಗಿ ಮಾಡೋಕೆ ಆಗಿಲ್ಲ ಎಂದು ಧನರಾಜ್‌ ಬಿಗ್‌ ಬಾಸ್‌ ಮುಂದೆ ಭಾವುಕರಾಗಿದ್ದಾರೆ.

ಇಂದು ರಾತ್ರಿ(ಅ.2ರಂದು) ಈ ಸಂಚಿಕೆ ಪ್ರಸಾರವಾಗಲಿದೆ.

ಯೂಟ್ಯೂಬ್‌ ಹಾಗೂ ರೀಲ್ಸ್‌ ನಲ್ಲಿ ಕಾಮಿಡಿ ವಿಡಿಯೋಸ್‌ ಮಾಡುತ್ತಲೇ ಜನಪ್ರಿಯರಾಗಿರುವ ದಕ್ಷಿಣ ಕನ್ನಡದ ಪುತ್ತೂರು ಮೂಲದ ಧನರಾಜ್‌ ಆಚಾರ್.‌ ಅಪಾರ ಫಾಲೋವರ್ಸ್‌ ಗಳನ್ನು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next