Advertisement

Bigg Boss Kannada ಸೀಸನ್‌ 11ರ ಆರಂಭಕ್ಕೆ ಸಿದ್ಧತೆ; ಸ್ಪರ್ಧಿಗಳಾಗಿ ಬರುವವರು ಇವರೇನಾ?

01:52 PM Jul 18, 2024 | Team Udayavani |

ಬೆಂಗಳೂರು: ಬಿಗ್ ಬಾಸ್‌ (BIGG BOSS) ಕಾರ್ಯಕ್ರಮಕ್ಕೆ ಆಯಾ ಭಾಷೆಯಲ್ಲಿ ಪ್ರತ್ಯೇಕವಾದ ವೀಕ್ಷಕರ ಬಳಗವೇ ಇದೆ. ಅದು ಯಾವುದೇ ಭಾಷೆಯಲ್ಲಿರಲಿ ʼಬಿಗ್‌ ಬಾಸ್‌ʼ ವಿವಾದಾತ್ಮಕ ಕಾರ್ಯಕ್ರಮವೆನ್ನುವ ಹಣೆಪಟ್ಟಿಯನ್ನೇ ಹೊಂದಿದೆ. ಅದಕ್ಕೆ ಕಾರಣ ದೊಡ್ಮನೆಯೊಳಗೆ ನಡೆಯುವ ಕೆಲ ಚಟುವಟಿಕೆ ಹಾಗೂ ಸ್ಪರ್ಧಿಗಳೆಂದರೆ ತಪ್ಪಾಗದು.

Advertisement

ಇತ್ತೀಚೆಗೆ ಬಿಗ್ ಬಾಸ್ ಮಲಯಾಳಂ ಸೀಸನ್ 6 ಮುಕ್ತಾಯ ಕಂಡಿದೆ. ಸದ್ಯ ಹಿಂದಿ ಬಿಗ್‌ ಬಾಸ್‌ ಓಟಿಟಿ ಸೀಸನ್‌ ಸಾಗುತ್ತಿದೆ. ಈ ನಡುವೆ ಕಳೆದ ವರ್ಷ ಭಾರೀ ಸದ್ದು ಮಾಡಿದ್ದ ಕನ್ನಡ ಬಿಗ್‌ ಬಾಸ್‌ ಕಾರ್ಯಕ್ರಮದ 11ನೇ ಸೀಸನ್‌ ಆರಂಭಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಕಿರುತೆರೆ, ಬೆಳ್ಳಿತೆರೆ, ಮಾಧ್ಯಮ, ರಾಜಕೀಯ, ಸಾಮಾಜಿಕ, ಸೋಶಿಯಲ್‌ ಮೀಡಿಯಾ ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆಗೈದ, ವಿವಾದದ ಮೂಲಕ ಸುದ್ದಿಯಾದ ಒಂದಷ್ಟು ಜನರು ಸ್ಪರ್ಧಿಗಳಾಗಿ ಕ್ಯಾಮರಾ ಕಣ್ಗಾವಲಿನ ʼಬಿಗ್‌ ಬಾಸ್‌ʼ ಮನೆಯೊಳಗೆ ಎಂಟ್ರಿ ಆಗುತ್ತಾರೆ.

ಕನ್ನಡದಲ್ಲಿ ಬಿಗ್‌ ಬಾಸ್‌ ಕಾರ್ಯಕ್ರಮಕ್ಕೆ ಹೆಚ್ಚಿನ ವೀಕ್ಷಕರಿದ್ದಾರೆ. ಕಿಚ್ಚ ಸುದೀಪ್‌ (Kichcha Sudeep) ಅವರು ನಡೆಸಿಕೊಡುವುದರಿಂದ ಈ ಕಾರ್ಯಕ್ರಮ ಕಿರುತೆರೆಯಲ್ಲಿ ಹೊಸ ಬಗೆಯ ದಾಖಲೆಯನ್ನು ಪ್ರತಿ ಸೀಸನ್‌ ನಲ್ಲೂ ಬರೆಯುತ್ತದೆ.

Advertisement

ಯಾವಾಗ ಶುರು ಬಿಗ್‌ ಬಾಸ್‌ ಸೀಸನ್ 11?:

ಇದೀಗ ಬಿಗ್‌ ಬಾಸ್‌ ಸೀಸನ್‌ 11ರ ಆರಂಭಕ್ಕೆ ಸಿದ್ದತೆಗಳು ನಡೆಯುತ್ತಿದೆ ಎಂದು ವರದಿಯಾಗಿದೆ. ಬೆಂಗಳೂರು ಹೊರವಲಯದಲ್ಲಿ ನಡೆಯುವ ಬಿಗ್‌ ಬಾಸ್‌ ಕಾರ್ಯಕ್ರಮದ ಮನೆಯ ತಯಾರಿಗಾಗಿ ನೂರಾರು ಜನರ ಅಗತ್ಯವಿರುತ್ತದೆ. ಇದಕ್ಕಾಗಿ ತಿಂಗಳುಗಟ್ಟಲೆ ಸಮಯಬೇಕು. ಹಾಗಾಗಿ ಸೆಪ್ಟೆಂಬರ್‌ ಅಂತ್ಯಕ್ಕೆ ಅಥವಾ ಅಕ್ಟೋಬರ್‌ 3ನೇ ವಾರದಿಂದ ಹೊಸ ಸೀಸನ್‌ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ.

ಇವರೇನಾ ಸ್ಪರ್ಧಿಗಳು.. ಪ್ರತಿ ಸೀಸನ್‌ ನಲ್ಲಿ ಬಿಗ್‌ ಬಾಸ್‌ ಆರಂಭವಾಗುವ ಮುನ್ನವೇ ಸ್ಪರ್ಧಿಗಳು ಯಾರಾಗಲಿದ್ದಾರೆ ಎನ್ನುವುದೇ ಕುತೂಹಲದ ವಿಚಾರ. ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅಷ್ಟು ಸುಲಭದಲ್ಲ. ವಿವಿಧ ಕ್ಷೇತ್ರಗಳ ಜೊತೆ ವಿವಿಧ ಮನಸ್ಥಿತಿಯವರು ದೊಡ್ಮನೆಯೊಳಗೆ ಇದ್ದರೆ ಆಟ ಸಾಗುವ ರೀತಿ ನೋಡುವುದೇ ಚೆಂದ. ಹಾಗಾಗಿ ಆಯೋಜಕರಿಗೆ ಇದೊಂದು ಸವಾಲೇ ಸರಿ.

ಬಿಗ್‌ ಬಾಸ್‌ ಸೀಸನ್ 11 ಆರಂಭವಾಗಲಿದೆ ಎನ್ನುವ ದೂರದ ಮಾತು ಕೇಳಿ ಬರುತ್ತಿರುವ ಬೆನ್ನಲ್ಲೇ ಸ್ಪರ್ಧಿಗಳು ಯಾರು ಎನ್ನುವುದರ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ. ʼಮಜಾಭಾರತʼ ಖ್ಯಾತಿಯ ರಾಘವೇಂದ್ರ, ಯೂಟ್ಯೂಬರ್‌ ವರ್ಷಾ ಕಾವೇರಿ, ನಟ ತ್ರಿವಿಕ್ರಮ್‌ ,‘ಬೃಂದಾವನ’ ಧಾರಾವಾಹಿ ನಟ ವರುಣ್ ಆರಾಧ್ಯ, ತುಕಾಲಿ ಸಂತು ಪತ್ನಿ ಮಾನಸಾ, ಸುನೀಲ್ ರಾವ್, ಭವ್ಯಾ ಗೌಡ, ಮೋಕ್ಷಿತಾ ಪೈ, ರೀಲ್ಸ್ ರೇಷ್ಮಾ ಸೇರಿದಂತೆ ಇತರರ ಹೆಸರು ಕೂಡ ಈ ಬಾರಿಯ ಬಿಗ್‌ ಬಾಸ್‌ ಸ್ಪರ್ಧಿಗಳ ಲಿಸ್ಟ್‌ ನಲ್ಲಿ ಕೇಳಿ ಬರುತ್ತಿದೆ. ಆದರೆ ಅಧಿಕೃತ ಮಾಹಿತಿ ಹೊರಬರಲು ಇನ್ನೂ ಕೆಲ ತಿಂಗಳುಗಳೇ ಬೇಕು.

ಸೀಸನ್‌ 10ರಲ್ಲಿ ಹತ್ತಾರು ವಿವಾದಗಳು.. ಕಳೆದ ಸೀಸನ್‌ ಅಂದರೆ ಬಿಗ್‌ ಬಾಸ್‌ ಸೀಸನ್‌ 10 ಕಾರ್ಯಕ್ರಮದಲ್ಲಿ ಹತ್ತಾರು ವಿವಾದಗಳು ಎಬ್ಬಿದ್ದವು. ಹುಲಿ ಉಗುರು ಧರಿಸಿದ್ದಾರೆ ಎನ್ನುವ ಆರೋಪದ ಮೇಲೆ ವರ್ತೂರು ಸಂತೋಷ್‌ ಅವರನ್ನು ಅರಣ್ಯ ಅಧಿಕಾರಿಗಳು ಬಿಗ್‌ ಬಾಸ್‌ ಮನೆಯೊಳಗೆ ಬಂದೇ ವಶಕ್ಕೆ ಪಡೆದುಕೊಂಡಿದ್ದರು. ಈ ಸುದ್ದಿ ಅಂದು ಟಿವಿ ಮಾಧ್ಯಮಗಳಲ್ಲಿ ಹತ್ತಾರು ದಿನ ಸುದ್ದಿಯಾಗಿತ್ತು. ಸಮುದಾಯವೊಂದರ ಬಗ್ಗೆ ತನಿಷಾ ಕುಪ್ಪಂಡ ಅವರು ಅವಮಾನವಾಗುವ ರೀತಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಅವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಟಾಸ್ಕ್‌ ವೊಂದರಲ್ಲಿ ಕಣ್ಣಿಗೆ ಸೋಪಿನ ನೀರು ತಾಗಿ ಸಂಗೀತಾ , ಡ್ರೋನ್‌ ಪ್ರತಾಪ್‌ ಆಸ್ಪತ್ರೆಗೆ ಸೇರಿದ್ದರು.

ಕಳೆದ ಸೀಸನ್‌ ನಲ್ಲಿ ಕಿಚ್ಚ ಸುದೀಪ್‌ ಅವರು ಸಿನಿಮಾ ಚಿತ್ರೀಕರಣದ ಕಾರಣ, ಕೆಲ ಎಪಿಸೋಡ್‌ ಗಳನ್ನು ಮಿಸ್‌ ಮಾಡಿಕೊಂಡಿದ್ದರು. ಈ ಬಾರಿ ಕಿಚ್ಚ ಸುದೀಪ್‌ ಅವರೇ ಕಾರ್ಯಕ್ರಮ ನಡೆಸಿಕೊಡುತ್ತಾರೋ ಅಥವಾ ಬೇರೆ ಯಾರಾದರೂ ನಡೆಸಿಕೊಡುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next