Advertisement

BBK-11: ಗೌತಮಿ ಮೇಲೆ ಸ್ವರ್ಗ ನಿವಾಸಿಗಳ ಕೆಂಗಣ್ಣು.. ಬಿಗ್‌ಬಾಸ್‌ನಲ್ಲಿಂದು ಮಾತಿನ ಯುದ್ಧ

11:44 AM Oct 01, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ-11 (Bigg Boss Kannada-11)ದಲ್ಲಿ ಮೊದಲ ದಿನವೇ ಸ್ವರ್ಗ – ನರಕದ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗಿದೆ. ಕೆಲವರು ಆಟದ ಮೂಲಕ ಉತ್ತರ ಕೊಡಲು ಸಿದ್ದವಾಗಿದ್ದರೆ, ಇನ್ನು ಕೆಲವರು ರಣತಂತ್ರದ ಮೂಲಕ ಉತ್ತರ ಕೊಡಲು ಸಿದ್ದರಾಗಿದ್ದಾರೆ.

Advertisement

ಮೊದಲ ದಿನ ಆಟದಲ್ಲಿ ಚೈತ್ರಾ (Chaitra Kundapura), ಯಮುನಾ (Yamuna) ಹಾಗೂ ಜಗದೀಶ್‌ (Lawyer Jagadish) ಅವರು ತನ್ನ ಅಸಲಿ ಆಟವನ್ನು ತೋರಿಸಲು ಶುರು ಮಾಡಿದ್ದಾರೆ. ಮೂವರ ಧ್ವನಿ ಬಿಗ್‌ ಬಾಸ್‌ ಮನೆಯಲ್ಲಿ ಜೋರಾಗಿ ಕೇಳಿದೆ. ಮೊದಲ ವಾರದ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಚೈತ್ರಾ ಅವರು ನೇರವಾಗಿ ನಾಮಿನೇಟ್‌ ಆಗಿದ್ದಾರೆ.

ಇನ್ನೊಂದು ಕಡೆ ಉಳಿದ ನಾಮಿನೇಷನ್‌ ಗಾಗಿ ಬಿಗ್‌ ಬಾಸ್‌ ಮನೆ ಮಂದಿಗೆ ಟಾಸ್ಕ್‌ವೊಂದನ್ನು ನೀಡಿದ್ದಾರೆ. ಎರಡನೇ ಹಂತದ ನಾಮಿನೇಷನ್‌ ಪ್ರಕ್ರಿಯೆಗೆ ಟಾಸ್ಕ್‌ ನೀಡಲಿದ್ದು,ಸಾಹಸ ಟಾಸ್ಕ್‌ ಮಾಡುವುದನ್ನು ಪ್ರೋಮದಲ್ಲಿ ತೋರಿಸಲಾಗಿದೆ.

ಯಮುನಾ, ಭವ್ಯಾ, ಗೌತಮಿಯ (Gauthami Jadav) ಹೆಸರು ನಾಮಿನೇಷನ್ ಆಗಿರುವುದು ಪ್ರೋಮೋದಲ್ಲಿ ತೋರಿಸಲಾಗಿದೆ. ಭವ್ಯಾ ಅವರ ಹಸರೆನ್ನು ಹೇಳಿ ಅವರು ಡಾಮಿನೇಟ್‌ ಆಗಿದ್ದಾರೆ ಎನ್ನುವ ಕಾರಣವನ್ನು ನೀಡಿದ್ದಾರೆ. ಇನ್ನೊಂದು ಕಡೆ ಎರಡು ಮೂರು ಮಂದಿ ಗೌತಮಿ ಅವರ ಹೆಸರು ಹೇಳಿ ಅವರಿಗೆ ನರಕದ ನಿವಾಸಿಗಳ ಮೇಲೆ ಹೆಚ್ಚಿನ ಕಾಳಜಿ ಇದೆ. ನಮ್ಮಗಿಂತ ಜಾಸ್ತಿ ಗೌತಮಿ ನರಕದ ನಿವಾಸಿಗಳ ಜತೆ ಇರುತ್ತಾರೆ ಎನ್ನುವ ಕಾರಣವನ್ನು ನೀಡಿದ್ದಾರೆ.

Advertisement

ಈ ನಡುವೆ ನರಕದ ನಿವಾಸಿಗಳ ಜತೆ ಹೆಚ್ಚಿನ ಟೈಮ್‌ ಕಳೆಯುತ್ತಾರೆ ಎನ್ನುವ ವಿಚಾರಕ್ಕೆ ಶಿಶಿರ್‌ (Shishir Shastry) ಹಾಗೂ ಯಮುನಾ ನಡುವೆ ಮಾತಿನ ಯುದ್ದ ನಡೆದಿದೆ.  ನಮ್ಮ ಹತ್ರ ಅವರು ಮಾತನಾಡಿದ್ರೆ ಏನು ತಪ್ಪು ಎಂದು ಶಿಶಿರ್‌ ಪ್ರಶ್ನಿಸಿದ್ದಾರೆ. ಇದಕ್ಕೆ ನಾನು ನಿಮಗೆ ಉತ್ತರ ಕೊಡಬೇಕಾಗಿಲ್ಲ ಎಂದು ಯಮುನಾ ಹೇಳಿದ್ದಾರೆ. ಈ ನಡುವೆ ಯಮುನಾ ಶಿಶಿರ್‌ ಅವರಿಗೆ Who are You? ಎಂದಿದ್ದಾರೆ. ಇದಕ್ಕೆ ಶಿಶಿರ್‌ ಅವರು ಗರಂ ಆಗಿ ನೀವು ನಮಗೆ Who are You? ಎಂದು ಹೇಳುವ ಹಾಗಿಲ್ಲ ಎಂದು ಮರು ಉತ್ತರ ಕೊಟ್ಟಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

ಇಂದು ರಾತ್ರಿ(ಅ.1ರಂದು) 9:30ಕ್ಕೆ ಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next