Advertisement

BBK11: ಬಿಗ್ ಮನೆಯಲ್ಲಿ ಜೋರಾಯಿತು ರಾಜಕೀಯ:ಪೋಸ್ಟರ್ ಅಂಟಿಸುವ ವಿಚಾರದಲ್ಲಿ ತಾರರಕ್ಕೇರಿದ ಜಗಳ

11:12 PM Oct 23, 2024 | Team Udayavani |

ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ  ನಾಮಿನೇಷನ್ ಪ್ರಕ್ರಿಯೆಯ ಜತೆಗೆ ವಾಗ್ವಾದವೂ ಕಾವು ಪಡೆದುಕೊಂಡಿದೆ.

Advertisement

ಐಶ್ವರ್ಯಾ ಹಾಗೂ ತಿವಿಕ್ರಮ್ ಅವರು ನೇರವಾಗಿ ಮಾನಸ ಅವರಿಗೆ ಪ್ರಬುದ್ಧತೆಯಿಲ್ಲ ಎನ್ನುವ ಕಾರಣಕ್ಕೆ ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಾನಸ ನನ್ನ ಗುಣ ಡಿಸೈಡ್‌ ಮಾಡೋಕೆ ನೀನು ಯಾವಳೋ. ನಿನ್ನ ತರ ನನಗೆ ಡವ್ ಮಾಡೋಕೆ ಬರಲ್ಲ ಎಂದಿದ್ದಾರೆ. ಇದಕ್ಕೆ ಐಶ್ವರ್ಯಾ ಅವಳು ಗಿವಳು ಏನು ಬೇಡ ಅಂಥ ಎಂದಿದ್ದಾರೆ.

”ಮಂಜಣ್ಣ ಎಲ್ಲೋ ಒಂದು ಕಡೆ ಕಾರಣರಾದರು ಅಂಥ ಮನೋಭಾವನೆ ನನ್ನದು..” ಎಂದಿದ್ದಾರೆ. ಇದಕ್ಕೆ ಮಂಜು “ನಾನು ಯಾರ ಜತೆ ಕೂತ್ಕೊಂಡು ಮಾತನಾಡಬೇಕೆನ್ನುವುದು ಬಿಗ್‌ ಬಾಸ್‌ ರೂಲ್ಸ್‌ ಅಲ್ಲಿ ಇಲ್ಲ. ಮನರಂಜನೆ ಮಾಡಲೇಬೇಕು ಅಂಥ ಆರ್ಡರ್‌ ಮಾಡೋದು ಯಾವುದು ಇಲ್ಲ.. ಎಂದಿದ್ದಾರೆ. ಇದಕ್ಕೆ ನೀವು ಹುಲಿ ಅಂಥ ತೋರಿಸಿಕೊಂಡು ಈಗ ಬದಲಾದರೆ ನಾವೇನು ಮಾಡೋಕೆ ಆಗಲ್ಲ ಎಂದು ತಿವಿಕ್ರಮ್‌ ಹೇಳಿದಾಗ, ಮಂಜು ಮಾತು ಮುಂದುವರೆಸಿ, “ ನಿಮ್ಮ ಹತ್ರನೇ ಬರಬೇಕು.. ಹಿಡಿಕ್ಕೋಬೇಕು.. ಎಂದಿದ್ದಾರೆ.

ಮಾನಸ ಹಾಗೂ ಮಂಜು ತಮಗೆ ಕೊಟ್ಟಿರುವ ಕೆಲಸವನ್ನು ಮಾಡಲ್ಲ. ನಾಮಿನೇಷನ್ ಅಂದ್ರೆ ಏನು ಅಂಥ ಮೊದಲು ತಿಳ್ಕೊಳ್ಳಿ ಎಂದು ಕ್ಯಾಪ್ಟನ್ ಜತೆ ವಾಗ್ವಾದ ನಡೆಸಿದ್ದಾರೆ.

ಈ ಮನೆಯಲ್ಲಿ ಯಾರ ಮೇಲೂ ನಂಬಿಕೆ ಇಟ್ಕೋಬೇಡ ಎಂದು ಒಬ್ಬರೇ ಕೂತು ಅಳುತ್ತಿದ್ದ ಹನುಮಂತು ಅವರಿಗೆ ಮಾನಸ ಸಮಾಧಾನ ಪಡಿಸಿದ್ದಾರೆ.

Advertisement

ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ರಾಜಕೀಯ:
ಟಾಸ್ಕ್ ವಿಚಾರವಾಗಿ ಬಿಗ್ ಬಾಸ್ ಎರಡು ತಂಡಗಳ ರಾಜಕೀಯ ಪಕ್ಷವನ್ನು ರಚನೆ ಮಾಡಲಾಗಿದೆ. ವಿಧಾನ ಸೌಧದಂತೆ ಬಿಗ್ ಸೌಧವಾಗಿ ದೊಡ್ಮನೆ ಮಾರ್ಪಟ್ಟಿದೆ.

ಪ್ರಾಮಾಣಿಕ, ಸಮರ್ಥರ ನ್ಯಾಯವಾದಿ ಪಕ್ಷ ಹಾಗೂ ಧರ್ಮಪರ ಸ್ನೇಹ ಪಕ್ಷ ಎಂದು ಎರಡು ಪಕ್ಷಗಳನ್ನು ರಚನೆ ಮಾಡಲಾಗಿದೆ.

ರಾಜಕೀಯ ಮುಖಂಡರು ಹಾಗೂ ಕಾರ್ಯಕರ್ತರ ರೀತಿಯಲ್ಲಿ ಸ್ಪರ್ಧಿಗಳು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಪೋಸ್ಟರ್ ಅಂಟಿಸುವ ವಿಚಾರದಲ್ಲಿ ಎರಡು ಪಕ್ಷಗಳ ನಡುವೆ ವಾದ – ವಾಗ್ವಾದ ನಡೆದಿದೆ.

ನಾಮಿನೇಟ್ ಆದವರು ಯಾರೆಲ್ಲ:
ನೇರವಾಗಿ ಮಂಜು ಹಾಗೂ ಮಾನಸ ಅವರು ನಾಮಿನೇಟ್ ಆಗಿದ್ದಾರೆ.  ಇನ್ನುಳಿದಂತೆ ಸುರೇಶ್, ಭವ್ಯಾ, ಮೋಕ್ಷಿತಾ, ಗೌತಮಿ, ಚೈತ್ರಾ, ಹಂಸಾ, ಶಿಶಿರ್ ನಾಮಿನೇಟ್ ಆಗಿದ್ದಾರೆ. ಸುರೇಶ್ ಅವರಿಗೆ ಅತಿ ಹೆಚ್ಚು 6 ಮತಗಳು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next