Advertisement

ಗಾಯದ ಮೇಲೆ ಬರೆ: ಮುಂದಿನ ಆರು ತಿಂಗಳ ಕಾಲ ಭುವನೇಶ್ವರ್ ಕುಮಾರ್ ಕ್ರಿಕೆಟ್ ನಿಂದ ಔಟ್!

11:32 AM Dec 25, 2020 | keerthan |

ಮುಂಬೈ: ಟೀಂ ಇಂಡಿಯಾಗೆ ಗಾಯದ ಮೇಲೆ ಬರೆ ಬಿದ್ದ ಹಾಗಾಗಿದೆ. ತಂಡದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ತಂಡದಿಂದ ಆರು ತಿಂಗಳ ಕಾಲ ಹೊರಬಿದ್ದಿದ್ದಾರೆ.

Advertisement

ಕಳೆದ ಐಪಿಎಲ್ ನ ಆರಂಭದಲ್ಲಿ ಗಾಯದ ಸಮಸ್ಯೆಗೆ ಸಿಲುಕಿದ್ದ ಭುವನೇಶ್ವರ್ ಕುಮಾರ್ ಇನ್ನೂ ಚೇತರಿಸಿಕೊಂಡಿಲ್ಲ. ಇನ್ನು ಅವರು ಕ್ರಿಕೆಟ್ ಗೆ ಲಭ್ಯವಾಗುವುದು ಮುಂದಿನ ಐಪಿಎಲ್ ಗೆ ಎನ್ನುತ್ತದೆ ವರದಿಗಳು.

ಗಾಯದ ಸಮಸ್ಯೆಗೆ ಸಿಲುಕಿದ್ದ ಭುವನೇಶ್ವರ್ ಕುಮಾರ್ ಕಳೆದ ಐಪಿಎಲ್ ಗೆ ವಾಪಾಸಾಗಿದ್ದರು. ಆದರೆ ಟೂರ್ನಿಯ ಆರಂಭದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ಸಿಲುಕಿದ್ದರು.

ಇದನ್ನೂ ಓದಿ:ಧನಾತ್ಮಕ ಅಂಶಗಳನ್ನು ಸ್ವೀಕರಿಸಿ: ಗೌತಮ್‌ ಗಂಭೀರ್‌ ಸಲಹೆ

ಕೆಲವೇ ವಾರಗಳಲ್ಲಿ ನಡೆಯಲಿರುವ ಸಯ್ಯದ್ ಮುಷ್ತಕ್ ಆಲಿ ಟ್ರೋಫಿ ಟಿ20 ಕೂಟಕ್ಕೂ ಭುವಿ ಆಯ್ಕೆಯಾಗಿಲ್ಲ. ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಭುವನೇಶ್ವರ್ ಅಲಭ್ಯರಾಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next