Advertisement

ಮೇ 9ರಿಂದ ದೇವಸ್ಥಾನಗಳಲ್ಲಿ ಭಜನೆ-ಸುಪ್ರಭಾತ: ಮುತಾಲಿಕ್‌

08:56 PM Apr 22, 2022 | Team Udayavani |

ಹುಬ್ಬಳ್ಳಿ: ಆಜಾನ್‌ ಬಂದ್‌ ಮಾಡಿಸಲು 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಈಗಾಗಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇವೆ. ಮೇ 1ರೊಳಗೆ ಕ್ರಮ ಕೈಗೊಳ್ಳದಿದ್ದರೆ ಮೇ 9ರಿಂದ ರಾಜ್ಯದ ಎಲ್ಲಾ ಮಠ, ದೇವಸ್ಥಾನಗಳಲ್ಲಿ ಭಜನೆ, ಸುಪ್ರಭಾತ ಹಾಡುಗಳು ಮೊಳಗಲಿವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ದೇವಸ್ಥಾನಗಳಿಗೆ ನೋಟಿಸ್‌ ನೀಡುವ, ಬಂದ್‌ ಮಾಡಿಸುವ ಕೆಲಸ ಮಾಡಿದರೆ ಉಗ್ರ ಹೋರಾಟ ನಡೆಯಲಿದೆ. ಮೊದಲು ಮಸೀದಿಗಳಿಗೆ ಹೋಗಿ ಬಂದ್‌ ಮಾಡಿಸಿ, ಕಾನೂನು ಉಲ್ಲಂಘಿಸಿರುವವರ ಮೇಲೆ ಕ್ರಮ ಕೈಗೊಳ್ಳಲಿ ಎಂದರು.

ಹಳೇ ಹುಬ್ಬಳ್ಳಿ ಗಲಭೆ ಪೂರ್ವ ನಿಯೋಜಿತ ಕೃತ್ಯ. ಹಿಂದೂಗಳನ್ನು ಬೆದರಿಸಿ ಇಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಬೇಕು ಎನ್ನುವ ಹುನ್ನಾರವಿದೆ. ಕಲ್ಲು ತೂರಾಟ ನಡೆಸಿದವರ ವಿರುದ್ಧ ಕೋಕಾ ಕಾಯ್ದೆ ಪ್ರಯೋಗ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next