Advertisement

Bengaluru: 2.5 ಕೋಟಿ ರೂ. ಮೌಲ್ಯದ ಕೆರೆ ಒತ್ತುವರಿ ಜಾಗ ತೆರವು ಕಾರ್ಯಾಚರಣೆ

12:37 PM Oct 05, 2024 | Team Udayavani |

ಬೆಂಗಳೂರು: ಕೆರೆಗಳ ಒತ್ತುವರಿ ಜಾಗದ ಸಂರಕ್ಷಣೆಗೆ ಮುಂದಾಗಿರುವ ಬಿಬಿಎಂಪಿ ಇದೀಗ ತನ್ನ ವಶದಲ್ಲಿದ್ದ ಬೆಂಗಳೂರಿನ ಪೂರ್ವ ವಲಯದ ಕಗ್ಗದಾಸಪುರ ಕೆರೆ ಜಾಗದ ಸಮೀಕ್ಷೆ ನಡೆಸಿ ಒತ್ತುವರಿಯಾಗಿದ್ದ 2.50 ಗುಂಟೆ ಜಾಗವನ್ನು ಶುಕ್ರವಾರ ವಶಕ್ಕೆ ಪಡೆದಿದೆ.

Advertisement

ಹೈಕೋರ್ಟ್‌ ರಿಟ್‌ ಅರ್ಜಿ ಆದೇಶದನ್ವಯ ಬಿಬಿಎಂಪಿ ಕೆರೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕಾರ್ಯಾಚರಣೆ ಕೈಗೊಂಡಿದ್ದು ಕಂದಾಯ ಇಲಾಖೆ ಸಹಕಾರದೊಂದಿಗೆ ಕಗ್ಗದಾಸಪುರ ಕೆರೆಯ ಸರ್ವೆ ಕಾರ್ಯ ನಡೆಸಿ 2.50 ಗುಂಟೆ ಜಾಗ ಒತ್ತುವರಿ ಮಾಡಿ ನಿರ್ಮಿಸಿದ್ದ ಶೆಡ್‌ ಜೆಸಿಬಿ ಯಂತ್ರದ ಮೂಲಕ ನೆಲಸಮಗೊಳಿಸಿ ಖಾಲಿ ಜಾಗವನ್ನು ಪಾಲಿಕೆ ವಶಕ್ಕೆ ಪಡೆದುಕೊಳ್ಳಲಾಗಿದೆ.

ಒತ್ತುವರಿ ಪ್ರದೇಶವು ಸುಮಾರು 2 ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿದ್ದು ಪಾಲಿಕೆಯಿಂದ ತೆರವಾದ ಪ್ರದೇಶಕ್ಕೆ ತಂತಿ ಬೇಲಿ ಅಳವಡಿಸುವ ಕಾರ್ಯ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next