Advertisement

ಕೆಂಪೇಗೌಡ ವಿಮಾನ ನಿಲ್ದಾಣ: ದೇಶದ ಮೊದಲ ಆಧಾರ್‌ ವಿಮಾನ ನಿಲ್ದಾಣ

07:26 PM Oct 09, 2017 | Team Udayavani |

ಹೊಸದಿಲ್ಲಿ : ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಪ್ರವೇಶದಿಂದ ತೊಡಗಿ ವಿಮಾನ ಏರುವ ತನಕದ ಪ್ರಕ್ರಿಯೆಗಳನ್ನು ಕೇವಲ ಹತ್ತೇ ನಿಮಿಷಗಳಲ್ಲಿ ಪೂರೈಸುವ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು  ಹೊಂದಿರುವ ದೇಶದ ಪ್ರಥಮ ವಿಮಾನ ನಿಲ್ದಾಣವೆಂಬ ಖ್ಯಾತಿ ಪಡೆಯುವುದಕ್ಕೆ ಸಜ್ಜಾಗಿದೆ.

Advertisement

ಆಧಾರ್‌ ಆಧಾರಿತ ಸೇವೆಯನ್ನು ಪ್ರಯಾಣಿಕರಿಗೆ ಒದಗಿಸುವ ಪ್ರಸ್ತಾವವನ್ನು ಬೆಂಗಳೂರು ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ (ಬಿಐಎಎಲ್‌) ಸಲ್ಲಿಸಿದೆ. ಈ ಪ್ರಸ್ತಾವಕ್ಕೆ ಅಧಿಕೃತ ಅನುಮೋದನೆ ಸಿಕ್ಕಿತೆಂದರೆ ಪ್ರಯಾಣಿಕರ ವಿಮಾನ ನಿಲ್ದಾಣ ಪ್ರವೇಶದಿಂದ ಹಿಡಿದು ಅವರು ವಿಮಾನವನ್ನು ಏರುವ ವರೆಗಿನ ಎಲ್ಲ ಬಯೋಮೆಟ್ರಿಕ್‌ ಪ್ರಕ್ರಿಯೆಗಳು ಆಧಾರ್‌ ನಂಬರನ್ನು ಆಧರಿಸಿ ಕೇವಲ ಹತ್ತೇ ನಿಮಿಷಗಳಲ್ಲಿ ಮುಗಿದು ಹೋಗುವುದು ಸಾಧ್ಯವಾಗುತ್ತದೆ. 2018ರ ಡಿಸೆಂಬರ್‌ ಒಳಗಾಗಿ ಆಧಾರ್‌ ಆಧಾರಿತ ಬಯೋಮೆಟ್ರಿಕ್‌ ವ್ಯವಸ್ಥೆಯು ಜಾರಿಗೆ ಬರುವುದೆಂದು ಬಿಐಎಎಲ್‌ ಹಾರೈಸಿದೆ.  

ಆಧಾರ್‌ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೆ ಬಂದಾಗ ಪ್ರಯಾಣಿಕರ ಕ್ಲಿಯರೆನ್ಸ್‌ ಪ್ರಕ್ರಿಯೆಗಳು ಅತ್ಯಂತ ಚುರುಕು ಮತ್ತು ವೇಗದಿಂದ ನಡೆಯಲು ಸಾಧ್ಯವಾಗಿ ಯಾವುದೇ ಬಗೆಯ ವಿಳಂಬಕ್ಕೆ ಅವಕಾಶ ಇರುವುದಿಲ್ಲ. ಇದರಿಂದಾಗಿ ಪ್ರಯಾಣಿಕರು ತಮ್ಮ ಗುರುತು ಕಾರ್ಡನ್ನು ಮತ್ತು ಬೋರ್ಡಿಂಗ್‌ ಪಾಸನ್ನು ಹಲವು ಹಂತಗಳಲ್ಲಿ ತೋರಿಸಿ ಓಕೆ ಮಾಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಪ್ರಯಾಣಿಕರು ನಿರಾಯಾಸವಾಗಿ ವಿಮಾನ ನಿಲ್ದಾಣ ಪ್ರವೇಶದಿಂದ ಹಿಡಿದು ವಿಮಾನ ಏರುವ ತನಕದ ಪ್ರಕ್ರಿಯೆಗಳು ಕೇವಲ ಹತ್ತೇ ನಿಮಿಷಗಳಲ್ಲಿ ಮುಗಿದು ಹೋಗುತ್ತವೆ; ಪ್ರಯಾಣಿಕರು ಈಗಿನಂತೆ ಯಾವುದೇ ಒತ್ತಡ, ಕ್ಲೇಶಕ್ಕೆ ಗುರಿಯಾಗಲಾರರು  ಎಂದು  ಬಿಐಎಎಲ್‌ ಹೇಳಿದೆ. 

ಈಗ ಚಾಲ್ತಿಯಲ್ಲಿರುವ ವ್ಯವಸ್ಥೆಯ ಪ್ರಕಾರ ಪ್ರಯಾಣಿಕರು ವಿಮಾನ ನಿಲ್ದಾಣ ಪ್ರವೇಶಿಸುವಲ್ಲಿಂದ ತೊಡಗಿ, ವಿಮಾನ ಏರುವ ತನಕದ ವರೆಗಿನ ಪ್ರಕ್ರಿಯೆಗಳಿಗೆ ಕನಿಷ್ಠ 25 ನಿಮಿಷಗಳನ್ನು ವ್ಯಯಿಸಿ ಒತ್ತಡ, ಕ್ಲೇಶಗಳನ್ನು ತಾಳಿಕೊಂಡಿರಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next