Advertisement

PM Modi: ಶುದ್ಧ ಗಾಳಿಗಾಗಿ ಮೋದಿಗೆ ಬಹಿರಂಗ ಪತ್ರ ಬರೆದ ಬೆಂಗಳೂರು ಬಾಲಕಿ

10:58 AM Dec 27, 2023 | Team Udayavani |

ಬೆಂಗಳೂರು: ನಗರಗಳ ವಾಯು ಗುಣಮಟ್ಟವನ್ನು ಹೆಚ್ಚಿಸಿ ಉಸಿರಾಡಲು ಶುದ್ಧ ಗಾಳಿಯ ವ್ಯವಸ್ಥೆ ಮಾಡುವಂತೆ ಬೆಂಗಳೂರಿನ ಹದಿಮೂರು ವರ್ಷದ ಬಾಲಕಿ ಅಸ್ಮಿ ಸಪ್ರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದು ಮನವಿ ಮಾಡಿದ್ದಾಳೆ.

Advertisement

ಇದು 13 ವರ್ಷದ ಬಾಲಕಿಯೊಬ್ಬಳ ಮಾತುಗಳಲ್ಲ, ನಿಶ್ಚಿಂತವಾಗಿ ಉಸಿರಾಡಲು ಬಯಸುವ ಎಲ್ಲ ಭಾರತೀಯರ ಯೋಚನೆ ಮತ್ತು ಕನಸು. ಆದ್ದರಿಂದ ವಾಯು ಮಾಲಿನ್ಯದ ಸಮಸ್ಯೆಯನ್ನು ದೆಹಲಿಗೆ ಸೀಮಿತಗೊಳಿಸಿ ನೋಡದೇ ದೇಶದ ಎಲ್ಲ ನಗರಗಳಿಗೂ ಅನ್ವಯಿಸಬೇಕು, ದೇಶದ ಎಲ್ಲ ಮಹಾನಗರಗಳ ಜನರು ಶುದ್ಧಗಾಳಿ ಪಡೆಯಲು ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಾಲಿನ್ಯ ಮುಕ್ತ ಗಾಳಿ ಸೇವನೆ ಪ್ರತಿ ಜೀವಿಯ ಹಕ್ಕು ಎಂದು ಬಾಲಕಿ ತನ್ನ ಪತ್ರದಲ್ಲಿ ಹೇಳಿದ್ದಾಳೆ.

ಅಸ್ತಮಾ ಮತ್ತು ಧೂಳಿನ ಅಲರ್ಜಿಯಿಂದ ಬಳಲುತ್ತಿರುವ ಅಸ್ಮಿ ಸಪ್ರ ನನ್ನಂತಹ ಲಕ್ಷಾಂತರ ಮಕ್ಕಳಿಗೆ ವಾಯು ಮಾಲಿನ್ಯ ಸಂಕಷ್ಟ ತಂದೊಡ್ಡಿದೆ. ನಾವು ಈಗ ಈ ಸಮಸ್ಯೆಯ ಗಂಭೀರತೆಯಿಂದ ತಾತ್ಕಾಲಿಕವಾಗಿ ಪಾರಾದರೂ ಭವಿಷ್ಯದಲ್ಲಿ ಕಂಟಕ ತಪ್ಪಿದಲ್ಲ ಎಂದು ಆಕೆ ಪತ್ರದಲ್ಲಿ ಎಚ್ಚರಿಸಿದ್ದಾರೆ. ವಾಯು ಗುಣಮಟ್ಟ ಹೆಚ್ಚಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕು, ಪರಿಸರ ರಕ್ಷಣೆಯ ಕಾನೂನು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಸ್ಮಿ ಸಪ್ರ ತನ್ನ ಪತ್ರದಲ್ಲಿ ಸಲಹೆ ನೀಡಿದ್ದಾಳೆ.

 

Advertisement

Udayavani is now on Telegram. Click here to join our channel and stay updated with the latest news.

Next