Advertisement

Bengaluru Bandh: ಬೆಂಗಳೂರು ಬಂದ್‌: ಬೆಳಗ್ಗೆ ಸ್ತಬ್ಧ, ಸಂಜೆ ಶಬ್ಧ!

10:04 AM Sep 12, 2023 | Team Udayavani |

ಬೆಂಗಳೂರು: ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೋಮವಾರ ಕರೆ ನೀಡಿದ್ದ “ಬೆಂಗಳೂರಿಗೆ ಬಂದ್‌’ಗೆ ಮಿಶ್ರ ಪ್ರತಿಕ್ರಿಯೆ ಕಂಡು ಬಂತು.

Advertisement

ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ ಬಸ್‌ಗಳ ಜತೆಗೆ ಆಟೋ, ಬೈಕ್‌ಗಳು ರಸ್ತೆಗಿ ಳಿದ ಹಿನ್ನೆಲೆಯಲ್ಲಿ ಅಷ್ಟೇನೂ ಬಿಸಿ ತಟ್ಟಲಿಲ್ಲ. ಕೆಲವು ಕಡೆಗಳಲ್ಲಿ ಬೆಳಗ್ಗೆ ಆಟೋ, ಟ್ಯಾಕ್ಸಿ ಸೇವೆ ಸ್ತಬ್ಧವಾಗಿತ್ತು. ಆದರೆ, ಸಂಜೆ ವೇಳೆ ಶಬ್ಧ ಜೋರಾ ಯಿತು. 36 ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ದ ಹಿನ್ನೆಲೆ ಯಲ್ಲಿ ಸಿಲಿಕಾನ್‌ ಸಿಟಿಯ ನಾಲ್ಕೂ ದಿಕ್ಕುಗಳಿಂದ ಮೆರವಣಿಗೆ ಹೋರಾಟ ಪ್ರತಿಭಟನಾಕಾರರು, ಮೆಜೆಸ್ಟಿಕ್‌ನ ಸಂಗೊಳ್ಳಿರಾಯಣ್ಣ ಪ್ರತಿಮೆ ಬಳಿ ಜಮಾಯಿಸಿದರು.

ಇಲ್ಲಿಂದಲೇ ಒಕ್ಕೂಟದ ಅಧ್ಯಕ್ಷ ನಟರಾಜ್‌ ಶರ್ಮಾ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಫ್ರೀಡಂಪಾರ್ಕ್‌ವರೆಗೆ ಬೃಹತ್‌ ಮೆರವಣಿಗೆ ನಡೆಸಿದರು. ಇಲ್ಲಿ ಸಮಾವೇಶಗೊಂಡು ಸರ್ಕಾ ರದ ಕಾರ್ಯ ವೈಖರಿಗೆ ಆಕ್ರೋಶ ಹೊರಹಾಕಿದರು. ಬಂದ್‌ ಹಿನ್ನೆಲೆ ಯಲ್ಲಿ ಖಾಸಗಿ ವಾಹನ ಚಾಲಕರು ಪ್ರತಿಭಟನಾ ಮೆರವಣಿಗೆ ನಡೆಸಿದ ಹಿನ್ನೆಲೆಯಲ್ಲಿ ನೃಪತುಂಗ ರಸ್ತೆ, ಮಹಾ ರಾಣಿ ಕಾಲೇಜು ರಸ್ತೆ ಸೇರಿ ನಗರದಲ್ಲಿ ಈ ವೇಳೆ ಮಾತನಾಡಿದ ಎಲೆಕ್ಟ್ರಾನಿಕ್‌ ಸಿಟಿಯ ಆಟೋ ಚಾಲಕ ರಮೇಶ್‌, ಸರ್ಕಾರ ಶಕ್ತಿ ಯೋಜನೆ ಜಾರಿಯಿಂದ ಕೂಲಿ ಸಿಗುತ್ತಿಲ್ಲ. ಮಹಿಳೆಯರಂತೂ ಆಟೋ ಮೇಲೆ ಆವಲಂಬಿತರಾಗಿಲ್ಲ. ಜತೆಗೆ ಕಾನೂನು ಬಾಹಿರ ವಾಗಿ ರ್ಯಾಪಿಡ್‌ ಬೈಕ್‌ ಸೇವೆ ನೀಡುತ್ತಿರುವುದರಿಂದ ಆಟೋ ವಾಹನ ಚಾಲಕರ ಬದುಕು ದುಸ್ಥಿರ ವಾಗಿದೆ ಎಂದು ಅಳಲು ತೊಡಿಕೊಂಡರು.

ಮೆಟ್ರೋ ರೈಲಿಗೆ ಮುಗಿಬಿದ್ದ ಪ್ರಯಾಣಿಕರು: ಆಟೋ, ಟ್ಯಾಕ್ಸಿಗಳು ಪ್ರತಿಭಟನೆ ಹಿನ್ನೆಲೆಯಲ್ಲಿ ಜನ ಮೆಟ್ರೋದತ್ತ ಮುಖ ಮಾಡಿದ್ದರು. ಬೆಳಗ್ಗೆಯಿಂದ ಮೆಟ್ರೋ ರೈಲು ಸಂಚಾರ ಹೆಚ್ಚಾಗಿತ್ತು. ಐಟಿ-ಬಿಟಿ ಉದ್ಯೋಗಿಗಳು, ವಿವಿಧ ವಲಯಗಳ ನೌಕ ರರು ಟ್ಯಾಕ್ಸಿಗಳಿಲ್ಲದ ಪರಿಣಾಮ ಮೆಟ್ರೋದಲ್ಲಿ ಪ್ರಯಾಣಿಸಿ ದರು.

Advertisement

Udayavani is now on Telegram. Click here to join our channel and stay updated with the latest news.

Next