Advertisement

ಬೆಳ್ತಂಗಡಿ ಶಾಸಕರ ಕಚೇರಿ ‘ಶ್ರಮಿಕ’ಆರಂಭ 

12:30 PM Sep 15, 2018 | |

ಬೆಳ್ತಂಗಡಿ: ಬೆಳ್ತಂಗಡಿಯ ಶಾಸಕ ಹರೀಶ್‌ ಪೂಂಜ ಅವರ ನೂತನ ಕಚೇರಿ ‘ಶ್ರಮಿಕ’ ಇಲ್ಲಿನ ಬಸ್‌ ನಿಲ್ದಾಣದ ಸಮೀಪದ ಜಿ.ಪಂ. ಎಂಜಿನಿಯರಿಂಗ್‌ ವಿಭಾಗದ ಕಚೇರಿ ಬಳಿಯ ಕಟ್ಟಡದಲ್ಲಿ ಸೆ. 13ರಂದು ಆರಂಭಗೊಂಡಿತು.

Advertisement

ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್‌.ಆರ್‌. ರಂಗಮೂರ್ತಿ ಕಚೇರಿಯನ್ನು ಉದ್ಘಾಟಿಸಿ, ಶುಭಹಾರೈಸಿದರು. ಸಂಸದ ನಳಿನ್‌ ಕುಮಾರ್‌ ಕಟೀಲು, ಬರೋಡಾದ ಉದ್ಯಮಿ ಶಶಿಧರ್‌ ಶೆಟ್ಟಿ, ವಿಹಿಂಪ ರಾಜ್ಯಾಧ್ಯಕ್ಷ ಎಂ.ಬಿ. ಪುರಾಣಿಕ್‌, ವಿಭಾಗ ಸಂಘಟನ ಕಾರ್ಯದರ್ಶಿ ಪ್ರಸಾದ್‌ಕುಮಾರ್‌, ಬಿಜೆಪಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಪ್ರತಾಪಸಿಂಹ ನಾಯಕ್‌, ಕುಶಾಲಪ್ಪ ಗೌಡ ಪೂವಾಜೆ, ಶಾರದಾ ರೈ, ಜಯಂತ ಕೋಟ್ಯಾನ್‌, ಸೀತಾರಾಮ ಬೆಳಾಲು, ಶಾಸಕರ ಹೆತ್ತವರಾದ ಮುತ್ತಣ್ಣ ಪೂಂಜ, ನಳಿನಿ ಪೂಂಜ, ಪತ್ನಿ ಸ್ವೀಕೃತಾ, ಪುತ್ರ ಗಹನ್‌ ಮೊದಲಾದವರಿದ್ದರು.

ಉದ್ಘಾಟನೆಯ ದಿನ ಶಾಸಕರು ಇಡೀ ದಿನ ಕಚೇರಿಯಲ್ಲಿದ್ದು, ಭೇಟಿ ನೀಡಿದ ಗಣ್ಯರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರನ್ನು ಸತ್ಕರಿಸಿದರು. ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಕಚೇರಿಗೆ ಭೇಟಿ ನೀಡಿ ಆಶೀರ್ವಚಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಜನಜಾಗೃತಿ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್‌, ವಾಣಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೋಮೇಗೌಡ, ಉಜಿರೆಯ ಶರತ್‌ಕೃಷ್ಣ ಪಡ್ವೆಟ್ನಾಯ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮುಖಂಡರಾದ ಕ್ಯಾ| ಬೃಜೇಶ್‌ ಚೌಟ, ಈಶ್ವರ್‌ ಕಟೀಲು, ಅಭಿಲಾಷ್‌ ಮೂಡಬಿದಿರೆ, ಸುನೀಲ್‌ ದಡ್ಡು, ಸಂದೀಪ್‌ ಶೆಟ್ಟಿ ಮಂಗಳೂರು, ಉದ್ಯಮಿಗಳಾದ ಪುಷ್ಪರಾಜ್‌ ಜೈನ್‌, ಗಣೇಶ ಗೌಡ ಪುದುವೆಟ್ಟು ಮತ್ತಿತರರು ಆಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next