Advertisement

ಬೆಳಪು ಗ್ರಾ.ಪಂ. : ಹತ್ವಾರಿ ಕೆರೆ ಅಭಿವೃದ್ಧಿಗೆ ಚಾಲನೆ  

10:10 PM May 21, 2020 | Sriram |

ಕಾಪು: ಕೋವಿಡ್‌-19ರ ಹರಡುವಿಕೆಯ ಭೀತಿಯಲ್ಲಿ ಇರುವ ಲಾಕ್‌ಡೌನ್‌ ನಿಂದಾಗಿ ಉದ್ಯೋಗವಿಲ್ಲದೆ ತೊಂದರೆಗೊಳಗಾಗಿರುವ ಗ್ರಾಮದ ಕೂಲಿ ಕಾರ್ಮಿಕರಿಗೆ ಕೂಲಿ ನೀಡುವ ನಿಟ್ಟಿನಲ್ಲಿ ಬೆಳಪು ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಹತ್ವಾರಿ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಚಾಲನೆ ನೀಡಿದರು.

Advertisement

ಬೆಳಪು ಗ್ರಾಮದ ಎಲ್ಲ ಮನೆಗೂ ಆಹಾರದ ಕಿಟ್‌ಗಳನ್ನು ಒದಗಿಸಲಾಗಿದೆ. ತೀರಾ ಬಡವರಿಗೆ ಔಷಧಿಗಳನ್ನು, ಮಾಸ್ಕ್ ಗಳನ್ನು, ಸ್ಯಾನಿಟೆ„ಸರ್‌ ಗಳನ್ನು ಒದಗಿಸಲಾಗಿದೆ. ಶುದ್ಧೀಕರಣ ಘಟಕದ ಮೂಲಕವಾಗಿ ನೀರು ನೀಡಲಾಗಿದೆ. ಪ. ಪಂಗಡ ಮತ್ತು ವಿಕಲಚೇತನರಿಗೆ ಆರ್ಥಿಕ ಸಹಕಾರ ನೀಡಲಾಗಿದ್ದು, ಉಚಿತವಾಗಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. 4ನೇ ಹಂತದ ಲಾಕ್‌ಡೌನ್‌ ಸಂದರ್ಭದಲ್ಲಿ ತೀರಾ ಆರ್ಥಿಕ ಸಂಕಷ್ಟಕ್ಕೊಳಗಾದ ಗ್ರಾಮಸ್ಥರಿಗೆ ಉದ್ಯೋಗ ಚೀಟಿ ಮೂಲಕ ಉದ್ಯೋಗ ನೀಡಲಾಗುತ್ತಿದ್ದು ದಿನವೊಂದಕ್ಕೆ 8 ಗಂಟೆ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಬೆಳಪು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಎಚ್‌.ಆರ್‌. ರಮೇಶ್‌, ಉಡುಪಿ ಜಿ.ಪಂ. ಎಂಜಿನಿಯರ್‌ ಯಂಕಪ್ಪ ನಾಯ್ಕ, ಬೆಳಪು ಗ್ರಾ. ಪಂ. ಮಾಜಿ ಅಧ್ಯಕ್ಷಕ್ಷೆ ವಿಮಲ ಅಂಚನ್‌, ಪ್ರಮುಖರಾದ ಸುನಂದ, ಜಯಂತಿ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next