Advertisement

India vs Sri Lanka: ಜು.22ಕ್ಕೆ ಭಾರತ ತಂಡ ಶ್ರೀಲಂಕಾಕ್ಕೆ ಪ್ರಯಾಣ

09:03 PM Jul 20, 2024 | Team Udayavani |

ನವದೆಹಲಿ: 3 ಪಂದ್ಯಗಳ ಟಿ20 ಮತ್ತು 3 ಪಂದ್ಯಗಳ ಏಕದಿನ ಸರಣಿಯ ಸಂಬಂಧ, ಭಾರತೀಯ ಕ್ರಿಕೆಟ್‌ ತಂಡ ಜು.22ರಂದು ಶ್ರೀಲಂಕಾಕ್ಕೆ ಪ್ರಯಾಣಿಸಲಿದೆ.

Advertisement

ಭಾರತ ಕ್ರಿಕೆಟ್‌ ತಂಡಕ್ಕೆ ನೂತನ ಕೋಚ್‌ ಆಗಿ ಆಯ್ಕೆಯಾಗಿರುವ ಗೌತಮ್‌ ಗಂಭೀರ್‌ಗೆ ಇದೇ ದಿನ ಅಧಿಕೃತವಾಗಿ ಕೋಚ್‌ ಜವಾಬ್ದಾರಿ ಹಸ್ತಾಂತರಗೊಳ್ಳಲಿದೆ. ತಂಡ ಲಂಕಾಕ್ಕೆ ಹೊರಡುವುದಕ್ಕೂ ಮುನ್ನ ಸೋಮವಾರ, ಮುಂಬೈಯಲ್ಲಿ ಗಂಭೀರ್‌ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಕೋಚ್‌ ಸ್ಥಾನದಿಂದ ಕೆಳಗಿಳಿದಿರುವ ಮಾಜಿ ಕ್ರಿಕೆಟರ್‌ ರಾಹುಲ್‌ ದ್ರಾವಿಡ್‌ ಜಾಗಕ್ಕೆ ಗಂಭೀರ್‌ ಬಂದಿದ್ದು, ಲಂಕಾ ಪ್ರವಾಸ ಸರಣಿ ಅವರ ಪಾಲಿಗೆ ನೀಡಲಾಗಿರುವ ಮೊದಲ ಜವಾಬ್ದಾರಿಯಾಗಿದೆ. ಕಳೆದ ಟಿ20 ವಿಶ್ವಕಪ್‌ ಟೂರ್ನಿಯ ಬೆನ್ನಲ್ಲೇ ದ್ರಾವಿಡ್‌ ಅವರ ಅವಧಿ ಮುಕ್ತಾಯಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next