Advertisement

BBK11: ಅಪ್ಪನಿಗೆ ಹುಟ್ಟಿದ್ರೆ ಎದುರುಗಡೆ ನಿಂತು ಮಾತನಾಡಲಿ: ಜಗದೀಶ್ ಗೆ ಚೈತ್ರಾ ಸವಾಲು

05:22 PM Oct 15, 2024 | Team Udayavani |

ಬೆಂಗಳೂರು: ಬಿಗ್ ಬಾಸ್ (Bigg Boss) ಮನೆಯಲ್ಲಿ ಆಟದ ವೇಗ ಜೋರಾಗಿದೆ. ಇಷ್ಟು ದಿನ ಮೌನವಾಗಿದ್ದ ಕೆಲ ಸ್ಪರ್ಧಿಗಳು ದೊಡ್ಮನೆ ಆಟಕ್ಕೆ ಹೊಂದಿಕೊಳ್ಳುತ್ತಿದ್ದಾರೆ.

Advertisement

ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಅನುಷಾ, ಶಿಶಿರ್, ಮಂಜು, ಐಶ್ವರ್ಯಾ ನಡುವೆ ಮಾತಿನ ಚಕಮಕಿ ನಡೆದಿದೆ.

ಆರಂಭಿಕ ವಾರದಲ್ಲಿ ಜೋರಾಗಿಯೇ ಸದ್ದು ಮಾಡಿದ್ದ ಚೈತ್ರಾ ಮೂರನೇ ವಾರದಲ್ಲಿ ಮತ್ತೆ ಸೌಂಡ್ ಮಾಡಿದ್ದಾರೆ. ಜಗದೀಶ್ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

ಆಕೆ ಏನು ಮಾತಾಡ್ತಾಳೆ ಚೈತ್ರಾ. ಆಕೆಗಲ್ಲ ನನಗೂ ಫಾಲೋವರ್ಸ್ ಇದ್ದಾರೆ. ಆಕೆ ಮೇಲೆ‌ 28 ಕೇಸ್ ಗಳಿವೆ ಎಂದು ಜಗದೀಶ್ ಗರಂ ಆಗಿದ್ದಾರೆ.

Advertisement

ನನ್ನ  ಎದುರುಗಡೆ ನಿಲ್ಲೋ ತಾಕತ್ತಿಲ್ಲ. ಕೊಚ್ಚೆ ಮೇಲೆ ಕಲ್ಲು ಹಾಕಬಾರದು. ತಾಕಿತ್ತಿದ್ರೆ ಎದುರುಗಡೆ ನಿಂತು‌ ಮಾತನಾಡಲಿ. ನನ್ನ ಕೇಸ್ ಬಗ್ಗೆ ಮಾತನಾಡೋ ಯೋಗ್ಯತೆ ಯಾರಿಗೂ ಇಲ್ಲ. 50 ಅಲ್ಲ ನೂರು ಕೇಸ್ ಹಾಕಿಸಿಕೊಳ್ಳುತ್ತೀನಿ. ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ. ಅಪ್ಪನಿಗೆ ಹುಟ್ಟಿದ್ರೆ ನನ್ನ ಕಣ್ಮುಂದೆ ಬಂದು ನನ್ ಕೇಸ್ ಬಗ್ಗೆ ಮಾತನಾಡಲಿ ಎಂದು ಮುಖಾಮುಖಿ ‌ನಿಂತುಕೊಂಡಿದ್ದಾರೆ.

ಈ ಸಂಚಿಕೆ ಮಂಗಳವಾರ ರಾತ್ರಿ(ಅ.15 ರಂದು) ಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next