Advertisement

BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ – ಯಮುನಾ ಟಾಕ್ ಫೈಟ್: ನಾಮಿನೇಟ್ ಅದವರು ಯಾರು

11:15 PM Sep 30, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಕನ್ನಡದ (Bigg Boss Kannada-11) ದ ಅಸಲಿ ಆಟ ಶುರುವಾಗಿದೆ. ಸ್ವರ್ಗ ,ನರಕದ ನಿವಾಸಿಗಳಾಗಿ ಸ್ಪರ್ಧಿಗಳು ವಿಭಜನೆ ಆಗಿದ್ದಾರೆ. ಒಂದು ಕಡೆ ಸ್ವರ್ಗದ ನಿವಾಸಿಗಳಿ ಉತ್ತಮ ಸೌಲಭ್ಯ ಸಿಕ್ಕಿದರೆ ಇನ್ನೊಂದೆಡೆ ನರಕದ ನಿವಾಸಿಗಳಿಗೆ ನಿಜವಾದ ನರಕ ದರ್ಶನವಾಗಲು ಶುರುವಾಗಿದೆ.

Advertisement

ಬಿಸಿ ನೀರಿಗಾಗಿ ಹಾತೊರೆದ ನರಕ ನಿವಾಸಿಗಳು:
ಚೈತ್ರಾ ಕುಂದಾಪುರ ಸೇರಿದಂತೆ ಇತರೆ ನರಕದ ಸ್ಪರ್ಧಿಗಳಿಗೆ ಗಂಟಲು ನೋವು ಉಂಟಾದ ಕಾರಣದಿಂದ ಬಿಸಿ ನೀರನ್ನು ಕೇಳಿದ್ದಾರೆ. ಆದರೆ ರೂಲ್ ಬುಕ್ ಪ್ರಕಾರ ನೀರನ್ನು ಕೊಡಬಹುದು. ಬಿಸಿ ನೀರನ್ನು ಕೊಡಲು ಸಾಧ್ಯವಿಲ್ಲವೆಂದು ಕೆಲ ಸ್ಪರ್ಧಿಗಳು ಹೇಳಿದ್ದಾರೆ. ಆದರೆ ಜಗದೀಶ್ ಅವರು ಬಿಸಿ ನೀರನ್ನು ನರಕದ ನಿವಾಸಿಗಳಿಗೆ ನೀಡಿದ್ದಾರೆ.

ಮನೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ನರಕದ ನಿವಾಸಿಗಳು:
ಸ್ವರ್ಗದ ಪ್ರದೇಶವನ್ನು ಸ್ವಚ್ಛಗೊಳಿಸಲು ನರಕದ ಚೈತ್ರಾ ಹಾಗೂ ಸುರೇಶ್ ಅವರನ್ನು ಸ್ವರ್ಗದ ನಿವಾಸಿಗಳು ಆಯ್ಕೆ ಮಾಡಿದ್ದಾರೆ. ಆದರೆ ಇದರ ಹಿಂದೆ ಎರಡೂ ಕಡೆಯವರು ತಮ್ಮದೇ ಪ್ಲ್ಯಾನ್ ಮಾಡಿದ್ದಾರೆ. ಒಳಗೊಳಗೆ ಮಾತನಾಡಿಕೊಂಡಿದ್ದಾರೆ.

ಈ ನಡುವೆ ಚೈತ್ರಾ ಅವರು ಸೀಬೆ ಕಾಯಿಯನ್ನು ಕಚ್ಚಿ ನರಕದ ಪ್ರದೇಶಕ್ಕೆ ಎಸೆದಿದ್ದಾರೆ. ಇದು ನಿಯಮದ ಉಲ್ಲಂಘನೆ ಎಂದು ಯಮುನಾ ಅವರು ಚೈತ್ರಾ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಕೆಲ ಸಮಯ ಚೈತ್ರಾ ಹಾಗೂ ಯಮುನಾ ನಡುವೆ ಮಾತಿನ ಚಕಮಕಿ ‌ನಡೆದಿದೆ.

ಸ್ವರ್ಗ ನಿವಾಸಿಗಳ ನಡುವೆ ಬಿರುಕು:
ಇನ್ನು ಸ್ವರ್ಗದ‌ ನಿವಾಸಿಗಳಲ್ಲಿ ಯಮುನಾ, ಭವ್ಯಾ, ಐಶ್ವರ್ಯಾ, ಧನರಾಜ್ ಅವರು ತಂಡದ ರೀತಿಯಲ್ಲಿ ಇದ್ದಾರೆ‌. ಇದಕ್ಕೆ ಜಗದೀಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವೆಲ್ಲಾ ಗೇಮ್ ಆಡಿದರೆ ನಾನು ಸಹ ಗೇಮ್ ಆಡುತ್ತೇನೆ. ನಾನು ಗೇಮ್ ಆಡಿದರೆ ಚೆಕ್ ಮೇಟ್ ಆಡುತ್ತೇನೆ ಎಂದು ಜಗದೀಶ್ ಸಹ ಸ್ಪರ್ಧಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಒಟ್ಟಿನಲ್ಲಿ ‌ಮೊದಲ ದಿನವೇ ಸ್ವರ್ಗ   ನರಕದ ಸ್ಪರ್ಧಿಗಳ ವಾದ   ವಾಗ್ವಾದ ಶುರುವಾಗಿದ್ದು, ಬಿಗ್ ಬಾಸ್ ಅಸಲಿ ಆಟ ನಿಧಾನವಾಗಿ ರಂಗೇರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next