Advertisement

BBK11: ಹಸ್ತ ರೇಖೆ‌ ನೋಡಿ ಸಹ ಸ್ಪರ್ಧಿಯ ಭವಿಷ್ಯ ನುಡಿದ ಚೈತ್ರಾ

10:59 PM Oct 01, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಕನ್ನಡ -11 (Bigg Boss Kannada-11)ದ ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವೆ ಮಾತಿಗೆ ಮಾತು ಬೆಳದಿದೆ.

Advertisement

ಸ್ವರ್ಗ – ನರಕದ ಸ್ಪರ್ಧಿಗಳ ಒಳಗೆಯೇ ಕಿತ್ತಾಟ ಶುರುವಾಗಿದೆ. ಒಂದು ಕಡೆ ಚೈತ್ರಾ – ಮಾನಸ ಅವರ ನಡುವೆ ಮಾತಿನ ಚಕಮಕಿ‌ ನಡೆದಿದ್ದು, ಇನ್ನೊಂದು ಕಡೆ ಶಿಶಿರ್, ಯಮುನಾ ನಡುವೆಯೂ ಟಾಕ್ ವಾರ್ ನಡೆದಿದೆ.

ನರಕದ ನಿವಾಸಿಯಾಗಿರುವ ಚೈತ್ರಾ ಬಿಡುವಿನ ವೇಳೆ ಸಹ ಸ್ಪರ್ಧಿ ಶಿಶಿರ್ ಅವರ ಹಸ್ತ ರೇಖೆ‌ ನೋಡಿ ಅವರ ಜಾತಕವನ್ನು ನುಡಿದಿದ್ದಾರೆ.

ನಿಮ್ಮ ಕೈಯಲ್ಲಿ ಎಂದಿಗೂ ಹಣ ಕಡಿಮೆ ಆಗಲ್ಲ. ಮದುವೆಯ ವಿಚಾರದಲ್ಲಿ ನೀವು 35- 38ರ ವಯಸ್ಸಿನಲ್ಲಿ ಮದುವೆ ಆಗುವುದು ಸೂಕ್ತವೆಂದು ಚೈತ್ರಾ ಶಿಶಿರ್ ಅವರ ಹಸ್ತ ರೇಖೆ‌ಯನ್ನು ನೋಡಿ ಭವಿಷ್ಯವನ್ನು ನುಡಿದಿದ್ದಾರೆ.

ಇತ್ತ ಸ್ವರ್ಗದ ನಿವಾಸಿ ಜಗದೀಶ್ ಅವರು ತನ್ನ ಸಹ ನಿವಾಸಿಗಳ ಮೇಲೆಯೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Advertisement

ಸಹ ಸ್ಪರ್ಧಿಗಳ ಜತೆಯೇ ವಕೀಲ್ ಸಾಬ್ ವಾಗ್ವಾದಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ನಾಮಿನೇಷನ್ ಪ್ರಕ್ರಿಯೆಗೆ ಟಾಸ್ಕ್ ನಡೆದಿದೆ.

ಜಗದೀಶ್, ಯಮುನಾ, ಮಂಜು, ಹಂಸಾ, ಭವ್ಯಾ ನಾಮಿನೇಟ್ ಆಗಿದ್ದಾರೆ.

ಶಿಶಿರ್, ಮಾನಸ, ಮೋಕ್ಷಿತಾ ಟಾಸ್ಕ್ ನಲ್ಲಿ ಸೋತ ಕಾರಣ ನೇರವಾಗಿ ನಾಮಿನೇಟ್ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next