Advertisement

BBK11: ಯಾರದೋ ಮನೆಯಲ್ಲಿ ಪಾತ್ರೆ ತಿಕ್ಕುತ್ತಿದ್ದೆ.. ದೊಡ್ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ

03:43 PM Oct 28, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಮನೆಯಿಂದ (Bigg Boss Kannada) ನಾಲ್ಕನೇ ವಾರ ಆಚೆ ಹೋಗುವುದು ಯಾರೆಂದು ಇಂದು ರಾತ್ರಿ (ಅ.28ರಂದು) ಗೊತ್ತಾಗಲಿದೆ. ಮೂಲಗಳ ಹಂಸ ಅವರು ದೊಡ್ಮನೆಯಿಂದ ಆಚೆ ಹೋಗಲಿದ್ದಾರೆ.

Advertisement

ವಾರಗಳು ಸಾಗುತ್ತಿದ್ದಂತೆ ಬಿಗ್‌ ಬಾಸ್‌ ಆಟಕ್ಕೆ ಸ್ಪರ್ಧಿಗಳು ಹೊಂದಿಕೊಳ್ಳುತ್ತಿದ್ದಾರೆ. ಕೆಲ ಸ್ಪರ್ಧಿಗಳು ವೈಲೆಂಟ್ ಆಗಿಯೇ ಬಿಗ್‌ ಬಾಸ್‌ ಆಟವನ್ನು ಆಡುತ್ತಿದ್ದರೆ, ಇನ್ನು ಕೆಲವರು ನಿಧಾನವಾದರೂ ಈಗೀಗ ದೊಡ್ಮನೆ ಆಟಕ್ಕೆ ತೆರೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್‌ ಅರ್ಜುನ್‌ʼ

ಬಿಗ್‌ ಬಾಸ್‌ ಆಟ 5ನೇ ವಾರಕ್ಕೆ ಕಾಲಿಟ್ಟಿದೆ. ಬಿಗ್‌ ಬಾಸ್‌ ಒಬ್ಬೊಬ್ಬ ಸ್ಪರ್ಧಿಗಳನ್ನು ಕನ್ಫೆಷನ್‌ ರೂಮ್ ಗೆ ಕರೆದು ಇದುವರೆಗೆ ಯಾರೊಂದಿಗೂ ಹೇಳಿಕೊಳ್ಳದ ಒಂದು ಘಟನೆಯನ್ನು ಹಂಚಿಕೊಳ್ಳಬಹುದೆಂದು ಹೇಳಿದ್ದಾರೆ.

Advertisement

ಒಬ್ಬೊಬ್ಬ ಸ್ಪರ್ಧಿಗಳ ತಮ್ಮ ಜೀವನದಲ್ಲಿನ ಕರಾಳ ಘಟನೆಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ. “ಒಂದು ವರ್ಷ ನಾನು ಯಾರದೋ ಮನೆಯಲ್ಲಿ ಮುಸುರೆ (ಪಾತ್ರೆ) ತಿಕ್ಕುತ್ತಿದ್ದೆ..” ಎಂದು ಚೈತ್ರಾ ಅವರು ಕಣ್ಣೀರಿಟ್ಟಿದ್ದಾರೆ.

“ಊಟ ಮಾಡಿದ್ದೀಯ ಅಂಥ ಕೇಳುವವರು ಇರಲಿಲ್ಲ, ಮೈಗೆ ಹುಷಾರಿಲ್ಲ ಅಂದ್ರು ಕೇಳುವರು ಇರಲಿಲ್ಲ. ಕೆಲವೊಂದು ಚಟಕ್ಕೆ ಬಿದ್ದಿದೆ..” ಎಂದು ಮಂಜು ಹೇಳಿಕೊಂಡಿದ್ದಾರೆ.

“ನನ್ನ ತಾಯಿ ಅನಾರೋಗ್ಯದಿಂದ ಹಾಸಿಗೆಯಲ್ಲಿದ್ದರು ನಮ್ಮ ಸಂಬಂಧಿಕರು ಅಮ್ಮನ ತಲೆ ತುಂಬುತ್ತಿದ್ದರು. ಆ ವೇಳೆ ನಾನು ತುಂಬಾ ಅಮ್ಮನ ಮೇಲೆ ಕಿರುಚಾಡಿದ್ದೆ. ಅವರನ್ನು ಮಾತನಾಡಿಸಿ ಕೆಲವು ದಿನಗಳ ಆದ್ಮೇಲೆ ಇನ್ನು ಅವರು ನನ್ನ ಜತೆ ಇರಲ್ಲ. ಇದೊಂದು ತಪ್ಪು ಮಾಡಬಾರದಿತ್ತು” ಎಂದು ಐಶ್ವರ್ಯಾ ಕಣ್ಣೀರಿಟ್ಟಿದ್ದಾರೆ.

ಸೋಮವಾರ (ಅ.28ರಂದು) ರಾತ್ರಿ ಈ ಸಂಚಿಕೆ ಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next