Advertisement

ಹಂಸಲೇಖರಿಗೆ ಭಟ್ಟರ ಗಿಫ್ಟ್

11:52 AM Apr 23, 2018 | |

ಸಂಗೀತ ನಿರ್ದೇಶಕರು ಮತ್ತು ಗೀತರಚನೆಕಾರರು ಆಡಿಯೋ ಕಂಪೆನಿ ಪ್ರಾರಂಭಿಸಿರುವ ಟ್ರೆಂಡ್‌ಗೆ ಈಗ ಯೋಗರಾಜ್‌ ಭಟ್‌ ಸಹ ಹೊಸದಾಗಿ ಸೇರ್ಪಡೆ ಯೋಗರಾಜ್‌ ಭಟ್‌. ಭಟ್‌ ಸಹ ಈಗ ಪಂಚರಂಗಿ ಆಡಿಯೋ ಎಂಬ ಹೊಸ ಆಡಿಯೋ ಕಂಪೆನಿಯನ್ನು ಹುಟ್ಟುಹಾಕಿದ್ದಾರೆ.

Advertisement

ಆ ಸಂಸ್ಥೆಯಿಂದ “ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎಂಬ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದು, ಹಾಡುಗಳನ್ನು ಹಿರಿಯ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕರಾದ ಹಂಸಲೇಖ ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ.

ಹೊಸ ಆಡಿಯೋ ಉದ್ಘಾಟನೆಯಾದ ನೆನಪಲ್ಲಿ ಹಂಸಲೇಖ ಅವರಿಗೆ ಹೊಸದೊಂದು ಹಾರ್ಮೋನಿಯಂ ಉಡುಗೊರೆಯಾಗಿ ನೀಡಿದ್ದಾರೆ ಯೋಗರಾಜ್‌ ಭಟ್‌. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಕುಶಾಲ್‌, ಕ್ರಿಷಿ ತಪಂಡ, ಅರ್ಜುನ್‌ ಜನ್ಯ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next