Advertisement

ಲಿಂಗಾಯತ ನಾಯಕತ್ವದ ಟೆಂಡರ್‌ ಕೊಟ್ಟಿಲ್ಲ: ಯತ್ನಾಳ್‌

10:05 PM Mar 31, 2022 | Team Udayavani |

ಬೆಂಗಳೂರು: ಲಿಂಗಾಯತ ಲೀಡರ್‌ ಆಗಲು ನೈತಿಕತೆ ಇರಬೇಕು. ಲಿಂಗಾಯತ ನಾಯಕತ್ವ ವಹಿಸುವುದಕ್ಕೆ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೆ ಟೆಂಡರ್‌ ಕೊಟ್ಟಿಲ್ಲ. ಆದರೆ, ಕೆಲವರು ಪಂಚಮಸಾಲಿಗಳಿಗೆ ಮೀಸಲಾತಿ ಕಲ್ಪಿಸುವುದನ್ನು ತಡೆದು ನಾಯಕರಾಗಲು ಹೊರಟಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಗುರುವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಸಂಬಂಧಿಸಿದ ಹೋರಾಟವನ್ನು ಅರಮನೆ ಮೈದಾನದಲ್ಲಿ ಮಾಡಲು ನಿರ್ಧರಿಸಲಾಗಿತ್ತು. ಅದಕ್ಕೆ ಮೈಸೂರು ಮಹಾರಾಣಿಯವರು  ಉಚಿತವಾಗಿ ಜಾಗ ನೀಡುವುದಾಗಿ ತಿಳಿಸಿದ್ದರು. ಅವರ ತಲೆಗೆ ಏನೇನೋ ತುಂಬಿ ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ತಡೆ ನೀಡಿದರು. ಪೊಲೀಸರ ಅನುಮತಿ ಸಿಗದಂತೆ ಮಾಡಿದರು. ಹಾಗೆ ಮಾಡಿದ್ದು  ಬಿ.ವೈ. ವಿಜಯೇಂದ್ರ ಎಂದು ನೇರವಾಗಿಯೇ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next