Advertisement

ಬಪ್ಪನಾಡು: ಸ್ವರ್ಣ ವಿನ್ಯಾಸ

06:50 AM Aug 18, 2017 | Team Udayavani |

ಮೂಲ್ಕಿ: ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವ ಭಾವಿಯಾಗಿ ಗುರುವಾರ ಕ್ಷೇತ್ರದಲ್ಲಿ ಸ್ವರ್ಣ ವಿನ್ಯಾಸ ಕಾರ್ಯಕ್ರಮವು ನಡೆಯಿತು.
ಕ್ಷೇತ್ರದ ತಂತ್ರಿಗಳಾದ  ಗೋಪಾಲಕೃಷ್ಣ ತಂತ್ರಿಗಳ ನೇತ್ರತ್ವದಲ್ಲಿ ಅರ್ಚಕರಾದ ಬಿ.ಕೃಷ್ಣದಾಸ ಭಟ್‌ ಮತ್ತು ಶ್ರೀಪತಿ ತಂತ್ರಿಗಳ ವಿಶೇಷ ಪ್ರಾರ್ಥನೆಯೊಂದಿಗೆ ದೈವಜ್ಞರಾದ ಗಿರೀಶ್‌ ಪೊದುವಾಳ್‌ ಅವರಿಂದ ಪ್ರಶ್ನಾ ಚಿಂತನೆ ನಡೆಯಿತು.

Advertisement

ಮೂಲ್ಕಿ ಸೀಮೆಯರಸರು ಮತ್ತು ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಜಯಮ್ಮ, ಮೂಲ್ಕಿ ವೆಂಕಟರಮಣ ದೇಗುಲದ ಮೊಕ್ತೇಸರ ಅತುಲ್‌ ಕುಡ್ವ,  ಗೋಪಾಲಕೃಷ್ಣ ಉಪಾಧ್ಯಾಯ, ವಾದಿರಾಜ ಉಪಾ ಧ್ಯಾಯ, ವೆಂಕಟರಾಜ ಉಡುಪ ಮೂಲ್ಕಿ ನಗರ ಪಂಚಾಯತ್‌ ಅಧ್ಯಕ್ಷ ಸುನೀಲ್‌ ಆಳ್ವ, ಪಟೇಲ್‌ ವಾಸುದೇವ ರಾವ್‌, ಉದಯ ಶೆಟ್ಟಿ , ಶೇಖರ ಶೆಟ್ಟಿ ಬಂಡಸಾಲೆ, ಗುರುವಪ್ಪ ಕೋಟ್ಯಾನ್‌, ದೊಡ್ಡಣ್ಣ ಮೊಲಿ, ಎಚ್‌.ವಿ. ಕೋಟ್ಯಾನ್‌, ಬೂಬ ಶೆಟ್ಟಿಗಾರ್‌ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next