Advertisement

ಕತ್ತಾರ್ ನಲ್ಲಿ ರಸ್ತೆ ಅಪಘಾತ: ಬಂಟ್ವಾಳ ಸಜೀಪದ ಯುವಕ ಮೃತ್ಯು

11:18 PM Dec 07, 2022 | Team Udayavani |

ಬಂಟ್ವಾಳ : ಬಂಟ್ವಾಳ ಸಜೀಪದ ಯುವಕನೋರ್ವ ಕತ್ತಾರ್ ನಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟ ಘಟನೆ ಡಿ. 6 ರ ರಾತ್ರಿ ನಡೆದಿದೆ.

Advertisement

ಸಜೀಪನಡುವಿನ ಕಂಚಿನಡ್ಕಪದವು ಚಟ್ಟೆಕ್ಕಲ್ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ ಫಹದ್(24) ಮೃತಪಟ್ಟ ಯುವಕ. ಆತ ತನ್ನ ಮಾಲಕನ ಪುತ್ರನನ್ನು ರೆಸಾರ್ಟ್‌ವೊಂದರಲ್ಲಿ ಬಿಟ್ಟು ಹಿಂದಿರುತ್ತಿದ್ದ ವೇಳೆ ಕಾರು ಪಲ್ಟಿಯಾಗಿ ಮೃತಪಟ್ಟಿದ್ದಾನೆ. ಅವರು ಐದು ತಿಂಗಳ ಹಿಂದಷ್ಟೇ ಕತ್ತಾರಿಗೆ ತೆರಳಿದ್ದು, ಅಲ್ಲಿ ಚಾಲಕನಾಗಿ ದುಡಿಯುತ್ತಿದ್ದರು ಎನ್ನಲಾಗಿದೆ.

ಕೊರೊನಾ ಪೂರ್ವದಲ್ಲಿ ಫಹದ್ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಊರಿಗೆ ಬಂದು ಇಲ್ಲೇ ಚಾಲಕನಾಗಿ ದುಡಿಯುತ್ತಿದ್ದ. ಆದರೆ ಕತ್ತಾರ್ ನಲ್ಲಿ ಉದ್ಯೋಗವಿದೆ ಎನ್ನುವ ಕಾರಣಕ್ಕೆ 5 ತಿಂಗಳ ಹಿಂದಷ್ಟೇ ತೆರಳಿದ್ದರು.

ಡಿ. 6ರ ರಾತ್ರಿ ಅಪಘಾತ ನಡೆಯುವ ಕೆಲ ಹೊತ್ತಿನ ಹಿಂದಷ್ಟೇ ಮನೆಯವರ ಜತೆ ಮಾತನಾಡಿದ್ದರು ಎನ್ನಲಾಗಿದೆ. ಅವರ ಮೃತದೇಹವನ್ನು ಊರಿಗೆ ತರುವ ನಿಟ್ಟಿನಲ್ಲಿ ಕುಟುಂಬ ಪ್ರಯತ್ನ ನಡೆಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಕೃಷಿ ಸಾಲ ಮಂಜೂರಾತಿಗೆ ಲಂಚ: ಬ್ಯಾಂಕ್‌ ಮ್ಯಾನೇಜರ್‌ಗೆ ಜೈಲು ಶಿಕ್ಷೆ

Advertisement
Advertisement

Udayavani is now on Telegram. Click here to join our channel and stay updated with the latest news.

Next