Advertisement

ದನ ಕಳ್ಳತನ ಸೇರಿ ಹಲವು ಪ್ರಕರಣದಲ್ಲಿ ತರೆಮರೆಸಿಕೊಂಡಿದ್ದ ಆರೋಪಿಯ ಬಂಧನ

01:35 PM Aug 14, 2021 | Team Udayavani |

ಬಂಟ್ವಾಳ: ಹಲವಾರು ವಾರೆಂಟ್ ಪ್ರಕರಣದ ಆರೋಪಿಯನ್ನು ಬಂಟ್ವಾಳ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ ನೇತ್ರತ್ವದ ವಿಶೇಷ ತಂಡ ಬಂಧಿಸಿದೆ.

Advertisement

ಮಂಗಳೂರು ತಾಲೂಕಿನ ಜೊಕಟ್ಟೆ ನಿವಾಸಿ ರಿಜ್ವಾನ್ ಯಾನೆ ರಿಚ್ಚು(30) ಬಂಧಿತ ಆರೋಪಿ.

ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದನ ಕಳ್ಳತನ ಸೇರಿದಂತೆ ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಗಳಿಗೆ ಸೇರಿದಂತೆ ಈತ ನ್ಯಾಯಾಲಯಕ್ಕೆ ಹಾಜರಾಗದೆ ಈತನ ಮೇಲೆ ವಾರೆಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡು ತಿರುಗಾಡುವ ಬಗ್ಗೆ ಮಾಹಿತಿ ಮೇಲೆ ಬಂಟ್ವಾಳ ಡಿ.ವೈ.ಎಸ್.ವೆಲೆಂಟೈನ್ ಡಿ.ಸೋಜ ಅವರ ತಂಡ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

ಇದನ್ನೂ ಓದಿ :ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ

Advertisement

ಈತನ ಮೇಲೆ ಬಂಟ್ವಾಳ ಅಲ್ಲದೆ ಕಾರ್ಕಳ ಗ್ರಾಮಾಂತರ, ಬಜಪೆ, ಪುತ್ತೂರು, ಗೋಕರ್ಣ, ಹಾಗೂ ಕೊಣಾಜೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾರೆಂಟ್ ಆರೋಪಿಯಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next