Advertisement

Bantwal ಶಂಭೂರು: ಮನೆಗೆ ಆಕಸ್ಮಿಕ ಬೆಂಕಿ; ಹಾನಿ

11:31 PM Sep 20, 2023 | Team Udayavani |

ಬಂಟ್ವಾಳ: ಶಂಭೂರು ದೇವಸ್ಥಾನ ರಸ್ತೆಯ ಬಳಿ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿ ಮನೆಯೊಳಗಿದ್ದ ಬಟ್ಟೆ ಬರೆಗಳು ಸೇರಿದಂತೆ ಸೊತ್ತುಗಳು ಸುಟ್ಟು ಭಸ್ಮವಾದ ಘಟನೆ ಸೆ. 18ರಂದು ನಡೆದಿದೆ.

Advertisement

ನರಿಕೊಂಬು ಗ್ರಾ.ಪಂ. ಸದಸ್ಯೆ ಸುಜಾತ ಸತೀಶ್‌ ಶಂಭೂರು ಅವರ ಮನೆಗೆ ಬೆಂಕಿ ತಗಲಿದ್ದು, ಘಟನೆಯ ವೇಳೆ ಮನೆ ಮಂದಿ ಹೊರಗೆ ಹೋಗಿದ್ದರು ಎನ್ನಲಾಗಿದೆ. ಹೀಗಾಗಿ ಆಕಸ್ಮಿಕವಾಗಿ ಬೆಂಕಿ ಹಿಡಿದಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಸಿಡಿಲಿನ ಪರಿಣಾಮದಿಂದಲೂ ಬೆಂಕಿ ಹತ್ತಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಘಟನೆಯಿಂದ ಮನೆಯಲ್ಲಿದ್ದ ಸೊತ್ತುಗಳು ಸುಟ್ಟು ಭಸ್ಮವಾಗಿದ್ದು, ಜತೆಗೆ ಮನೆಯ ಗೋಡೆಗಳಿಗೂ ಹಾನಿಯಾಗಿದೆ. ಬಣ್ಣ ಸಂಪೂರ್ಣ ಮಾಸಿದ್ದು, ಸುಟ್ಟು ಕರಕಲಾಗಿದೆ. ಘಟನ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರಕ್ಕಾಗಿ ವರದಿ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next