Advertisement

Crime: ವ್ಯಕ್ತಿ ಹತ್ಯೆಗೈದಿದ್ದ ನಾಲ್ವರು ಆರೋಪಿಗಳ ಬಂಧನ

03:55 PM Sep 29, 2023 | Team Udayavani |

ಬೆಂಗಳೂರು: ಇತ್ತೀಚೆಗೆ ಹಳೇ ದ್ವೇಷಕ್ಕೆ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.

Advertisement

ಬಸವನಗುಡಿ ನಿವಾಸಿಗಳಾದ ಖಾಸೀಫ್, ಶಬ್ಬೀರ್‌, ಅರ್ಮಾನ್‌ ಹಾಗೂ ಶಫಿ ಬಂಧಿತರು.

ಆರೋಪಿಗಳು ಸೆ.22ರಂದು ಅರ್ಬಾಜ್‌ ಎಂಬಾತನನ್ನು ಹತ್ಯೆಗೈದ್ದರು. ಕೊಲೆಯಾದ ಅರ್ಬಾಜ್‌ ಹಾಗೂ ಆರೋಪಿಗಳು ಪರಿಚಯಸ್ಥರಾಗಿದ್ದು, ಈ ಹಿಂದೆ ಸರಕಳ್ಳತನ, ರಾಬರಿ ಸೇರಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಈ ಮಧ್ಯೆ ಅರ್ಬಾಜ್‌ ಹೊರತುಪಡಿಸಿ ಇತರೆ ಆರೋಪಿಗಳು ಕೆಲ ದಿನಗಳ ಹಿಂದೆ ಕಳವು ಕೃತ್ಯದಲ್ಲಿ ಭಾಗಿಯಾಗಿ, ಬಂಧನಕ್ಕೊಳಗಾದ್ದರು. ಆದರೆ, ವಿಚಾರಣೆಯಲ್ಲಿ ಅರ್ಬಾಜ್‌ ಕೂಡ ಕೃತ್ಯದಲ್ಲಿ ಪಾಲುದಾರನಾಗಿದ್ದಾನೆ ಎಂದು ಸುಳ್ಳು ಹೇಳಿಕೆ ನೀಡಿದ್ದರು. ಹೀಗಾಗಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಜೈಲಿನಿಂದ ಹೊರಬಂದ ಅರ್ಬಾಜ್‌, ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದ. ಈ ದ್ವೇಷದಿಂದ ಆರೋಪಿಗಳು ಸೆ.22ರಂದು ಅರ್ಬಾಜ್‌ನನ್ನು ಹತ್ಯೆಗೈದಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next