Advertisement

Bajpe ಮಗನಿಂದಲೇ ತಾಯಿಯ ಕೊಲೆ; ಅತ್ಯಾಚಾರ

01:01 AM Nov 01, 2023 | Team Udayavani |

ಬಜಪೆ: ಕಟೀಲು ಸಮೀಪದ ಕೊಂಡೇಲ ಗ್ರಾಮದ ದುರ್ಗಾನಗರದಲ್ಲಿನ ಮಹಿಳೆ ರತ್ನಾ ಶೆಟ್ಟಿ (56) ಅವರ ಬಾಯಿಗೆ ಟೊಮೊಟೋ ಹಾಕಿ ಉಸಿರುಗಟ್ಟಿಸಿ ಕೊಲೆಗೈದು ಬಳಿಕ ಅತ್ಯಾಚಾರ ಮಾಡಿದ ಅವರ ಮಗ ರವಿರಾಜ್‌ ಶೆಟ್ಟಿ (33)ಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Advertisement

ತಾಯಿಯನ್ನು ಕೊಲೆಗೈದು ಅತ್ಯಾಚಾರ ಮಾಡಿರುವ ವಿಲಕ್ಷಣ ಘಟನೆ ಇದಾಗಿದೆ. ಅ. 26ರಂದು ರಾತ್ರಿ ತಾಯಿ ರತ್ನಾ ಅವರ ಮೇಲೆ ಕೈ ಹಾಕಿದ್ದು, ಇದರಿಂದ ಅವರು ಭಯಪಟ್ಟು ಕುಳಿತುಕೊಂಡಿದ್ದ ವೇಳೆ ಅವರ ಬಾಯಿ ಹಾಗೂ ಮೂಗನ್ನು ಸೇರಿಸಿ ಬಿಗಿದಿಟ್ಟುಕೊಂಡು ಟೊಮೊಟೊ ಹಣ್ಣು ಬಾಯಿಗೆ ಹಾಕಿದ್ದು ಅವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬಳಿಕ ಅತ್ಯಾಚಾರವನ್ನು ಕೂಡ ಮಾಡಿದ್ದಾನೆ. ಶವವನ್ನು ಹಗ್ಗದಿಂದ ಕಟ್ಟಿದ್ದ. ಅದನ್ನು ಬೇರೆಡೆಗೆ ಸಾಗಿಸುವ ಬಗ್ಗೆ ಯೋಚನೆ ಮಾಡಿದ್ದ. ಆದರೆ ಅದಕ್ಕೆ ಸಮಯ ಸಿಗಲಿಲ್ಲ. ಬಳಿಕ ಕಿನ್ನಿಗೋಳಿಯಲ್ಲಿನ ಲಾಡ್ಜ್ವೊಂದರಲ್ಲಿ ಅ. 27 ಮತ್ತು 28ರಂದು ರಾತ್ರಿ ಉಳಿದುಕೊಂಡಿದ್ದ.

ಶನಿವಾರ ಪಕ್ಕದ ಮನೆಯವರಿಗೆ ತಾಯಿಗೆ ಹುಷಾರಿಲ್ಲ ಅವರನ್ನು ಸಂಬಂಧಿಕರ ಮನೆಗೆ ಬಿಟ್ಟು ಬಂದಿದ್ದಾನೆ ಎಂದು ಸುಳ್ಳು ಹೇಳಿದ್ದ. ರೂಮಿನಲ್ಲಿ ತಾಯಿ-ಮಗ ಇಬ್ಬರೇ ಇದ್ದರು. ಪಕ್ಕದ ಮನೆಯವರಿಗೆ ದುರ್ವಾಸನೆ ಬಂದ ಕಾರಣ ಹಾಗೂ ರೂಮ್‌ಗೆ ಬೀಗ ಹಾಕಿದು, ಒಳಗಡೆ ಶವ ಇತ್ತು. ರವಿರಾಜ್‌ ಮದ್ಯ ಕುಡಿದಿದ್ದ. ಗಾಂಜಾದ ಸೇವನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಆದರೂ ಪರೀಕ್ಷೆ ಮಾಡಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಜಪೆ ಪೊಲೀಸರು ಅ. 30ರಂದು ಸಂಜೆ ರವಿರಾಜ್‌ ಶೆಟ್ಟಿಯನ್ನು ಬಂಧಿಸಿದ್ದು, ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next