Advertisement

Bajpe ಮಾದಕವಸ್ತು ಸಾಗಾಟ; ಮೂವರ ಸೆರೆ

01:29 AM Dec 23, 2023 | Team Udayavani |

ಬಜಪೆ: ಬಜಪೆ ಠಾಣೆಯ ಪಿಎಸ್‌ಐ ಗುರಪ್ಪ ಕಾಂತಿ ಮತ್ತು ಅವರ ಸಿಬಂದಿ ಇಲ್ಲಿನ ಶಾಂತಿಗುಡ್ಡೆ ಚೆಕ್‌ ಪಾಯಿಂಟ್‌ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್‌ನಲ್ಲಿ ಮೂವರು ಬರುತ್ತಿದ್ದುದನ್ನು ನೋಡಿ ನಿಲ್ಲಿಸುವಂತೆ ಸೂಚನೆ ನೀಡಿದಾಗ ಬೈಕ್‌ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದಾಗ ಅವರನ್ನು ವಶಕ್ಕೆ ಪಡೆಯಲಾಯಿತು.

Advertisement

ಹೊಸಬೆಟ್ಟುವಿನ ಅಣ್ಣಪ್ಪಸ್ವಾಮಿ ಯಾನೆ ಮನು (23), ಮಂಜೇಶ್ವರದ ಮೊಹಮ್ಮದ್‌ ಜುನೈದ್‌ ಯಾನೆ ಜುನ್ನಿ (29) ಮತ್ತು ಕುಳಾಯಿಯ ಎಂ.ಕೆ. ಆಕಾಶ ಯಾನೆ ಮಾದವ ಕೌಶಲ್ಯ ಆಕಾಶ (24) ಬಂಧಿತರು. ಅವರನ್ನು ವಿಚಾರಣೆ ನಡೆಸಿದಾಗ ಮಾದಕವಸ್ತು ಎಂಡಿಎಂಎ ಕ್ರಿಸ್ಟಲ್‌ ಅನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಹೋಗುತ್ತಿರುವುದಾಗಿ ತಿಳಿಸಿದ್ದರು.

ಆರೋಪಿಗಳಿಂದ 30 ಸಾವಿರ ರೂ. ಮೌಲ್ಯದ 6.27 ಗ್ರಾಂ ಎಂಡಿಎಂಎ ಕ್ರಿಸ್ಟಲ್‌, ಬೈಕ್‌ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next