Advertisement

Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

01:27 AM Oct 02, 2024 | Team Udayavani |

ಬಜಪೆ: ಮಳವೂರು ರೈಲ್ವೇ ಸೇತುವೆಯ ಬಳಿ ಪಾಲ್ಗುಣಿ ನದಿಯ ನೀರಿನಲ್ಲಿ ರವಿವಾರ ಸಂಜೆ ವೇಳೆ ಈಜಾಡಲು ತೆರಳಿದ್ದ ವೇಳೆ ನೀರುಪಾಲಾಗಿದ್ದ ಇನ್ನೊರ್ವ ಯುವಕ ಕೊಟ್ಟಾರ ಚೌಕಿಯ ಸುಮಿತ್‌ (20) ಶವ ಮಂಗಳವಾರ ಬೆಳಗ್ಗೆ ನದಿಯ ನೀರಿನಲ್ಲಿ ಪತ್ತೆಯಾಗಿದೆ.

Advertisement

ಸುಮಿತ್‌ ಶವ ಪತ್ತೆಗಾಗಿ ಸೋಮವಾರ ದಿನವಿಡೀ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಮುಳುಗುತಜ್ಞರು ಆಗಮಿಸಿ ಕಾರ್ಯಾಚರಣೆ ಮಾಡಿತ್ತು. ಮಂಗಳವಾರ ಬೆಳಗ್ಗೆ ಮಳವೂರು ರೈಲ್ವೇ ಸೇತುವೆ ಹಾಗೂ ಮಳವೂರು ಡ್ಯಾಂ ಮಧ್ಯೆ ನೀರಿನಲ್ಲಿ ಶವ ಪತ್ತೆಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next