Advertisement

Bajpe: ನೀರುಪಾಲಾಗಿದ್ದ ಒಬ್ಬನ ಶವ ಪತ್ತೆ

08:40 PM Sep 30, 2024 | Team Udayavani |

ಬಜಪೆ: ಮಳವೂರು ರೈಲ್ವೇ ಸೇತುವೆಯ ಬಳಿ ಫ‌ಲ್ಗುಣಿ ನದಿಯ ನೀರಿನಲ್ಲಿ ರವಿವಾರ ಸಂಜೆ ನೀರುಪಾಲಾಗಿದ್ದ ಇಬ್ಬರಲ್ಲಿ ಉರ್ವಸ್ಟೋರಿನ ಅನೀಶ್‌ (19) ಅವರ ಮೃತದೇಹವನ್ನು ಸೋಮವಾರ ಬೆಳಗ್ಗೆ 8.30ಕ್ಕೆ ಬೆಂಗ್ರೆಯ ಮುಳುಗು ತಜ್ಞರು ಮೇಲೆಕ್ಕೆತ್ತಿದ್ದಾರೆ. ಕೊಟ್ಟಾರ ಚೌಕಿಯ ಸುಮಿತ್‌ (20) ಅವರಿಗಾಗಿ ಶೋಧ ಮುಂದುವರಿದಿದೆ.

Advertisement

ಸೋಮವಾರ ಬೆಳಗ್ಗೆ ಬೆಂಗ್ರೆಯಿಂದ ಮುಳುಗು ತಜ್ಞರು ಆಗಮಿಸಿ ಶೋಧ ಆರಂಭಿಸಿದ್ದರು. ಅವರ ಜತೆಯಲ್ಲಿ ಅಗ್ನಿಶಾಮಕ ದಳವೂ ಕಾರ್ಯಾಚರಣೆ ನಡೆಸಿದೆ. ಬಜಪೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂದೀಪ್‌ ಜಿ.ಎಸ್‌. ಹಾಗೂ ಸಿಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next