Advertisement

ಎಚ್‌ಡಿಕೆ ಕೆಟ್ಟ, ಕ್ರೂರ ಸಿಎಂ: ಈಶ್ವರಪ್ಪ

06:20 AM Sep 23, 2018 | |

ಕೊಪ್ಪಳ: ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ಕಂಡ ಅತ್ಯಂತ ಕೆಟ್ಟ-ಕ್ರೂರ ಮುಖ್ಯಮಂತ್ರಿಯಾಗಿದ್ದಾರೆ. ಗೂಂಡಾಗಿರಿ ಸರ್ಕಾರದ ವೈಖರಿಗೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಆರೋಪಿಸಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ದಂಗೆ ಏಳುವ ಹೇಳಿಕೆ ನೀಡಿದ್ದಾರೆ. ರಾಜ್ಯದ ಜನತೆ ಕುಮಾರಸ್ವಾಮಿ ಅವರ ಇನ್ನೊಂದು ಮುಖ ನೋಡಿದ್ದಾರೆ. ಎಲ್ಲ ಅಧಿ ಕಾರವೂ ನನಗೇ ಬೇಕು ಎನ್ನುವ ಸ್ವಭಾವದವರಾಗಿದ್ದಾರೆ. ಇವರೊಬ್ಬ ಗೂಂಡಾ ಸಿಎಂ, ಗೂಂಡಾ ಸರ್ಕಾರವಾಗಿದೆ ಎಂದರು.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ದಂಗೆ ಹೇಳಿಕೆ ಬಗ್ಗೆ ಮೌನ ವಹಿಸಿರುವುದೇಕೆ? ಸಿಎಂ ಹೇಳಿಕೆಗೆ ನಿಮ್ಮ ಬೆಂಬಲ ಇದೆಯೋ? ಇಲ್ಲವೋ ಎನ್ನುವುದನ್ನು ಜನರ ಮುಂದೆ ತಿಳಿಸಬೇಕು. ಇಷ್ಟಾದರೂ ಸಿದ್ದರಾಮಯ್ಯ ಅವರು ಅಹಂಕಾರದಿಂದ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ ಅವಕಾಶವಾದಿ ರಾಜಕಾರಣ ಮಾಡಿ, ಗೂಂಡಾಗಳಿಂದ ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಿಸಿದೆ ಎಂದರು.

ದಂಗೆ ಹೇಳಿಕೆಯ ಬಗ್ಗೆ ಹಿರಿಯರಾದ ದೇವೇಗೌಡರಾದರೂ ಖಂಡಿಸಬಹುದಿತ್ತು. ಆದರೆ, ಅವರೂ ಖಂಡಿಸಿಲ್ಲ. ಈ ಕುರಿತು ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದ್ದು, ಅವರು ಕೂಡಲೇ ಮಧ್ಯಪ್ರವೇಶಿಸಲಿ. ಸಿಎಂ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲು ಮಾಡಲಿ. ಮೈತ್ರಿ ಸರ್ಕಾರ ಬಿದ್ದರೆ ನಾವೇನು ಮೌನ ವಹಿಸಲ್ಲ. ನಾವೇನು ಸನ್ಯಾಸಿಗಳಲ್ಲ, ಯಾವುದೇ ಶಾಸಕರಿಗೂ ನಾವು ಆಫರ್‌ ಕೊಟ್ಟಿಲ್ಲ. ಒಂದು ವೇಳೆ ಬಿಜೆಪಿಗೆ ಬರುತ್ತೇನೆ ಎಂದರೆ ನಾವು ಬೇಡ ಅನ್ನೊದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next