Advertisement

ಕೆಸರುಮಯವಾದ ನಯನಾಡು –ಊರ್ಲ ಸಂಪರ್ಕ ರಸ್ತೆ

11:32 AM Jul 24, 2018 | Karthik A |

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ನಯನಾಡು ಜಂಕ್ಷನ್‌ನಿಂದ ಊರ್ಲ ಸಂಪರ್ಕ ರಸ್ತೆ ಕೆಸರುಮಯವಾಗಿದ್ದು ಜನ ಮತ್ತು ವಾಹನ ಸಂಚಾರಕ್ಕೆ ತೊಡಕನ್ನುಂಟು ಮಾಡಿದೆ. ಮಣ್ಣಿನ ಈ ಕಚ್ಛಾ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಡಾಮರು ರಸ್ತೆಯಾಗಿ ಪರಿವರ್ತಿಸಬೇಕೆಂದು ಗ್ರಾಮಸ್ಥರು ಬಹಳ ಸಮಯದಿಂದ ಕೇಳುತ್ತಿದ್ದರೂ ಅವರ ಬೇಡಿಕೆ ಕೈಗೂಡಿಲ್ಲ. ನೆರೆಯ ಕುಕ್ಕೇಡಿ ಗ್ರಾಮ ಹಾಗೂ ಕೊಳಕ್ಕೆಬೈಲು ಮೂಲಕ ಮೂರ್ಜೆಗೆ ಸಾಗಲು ಇದು ಹತ್ತಿರದ ದಾರಿಯಾಗಿದೆ. ಆ ಭಾಗದ ಜನರು ನಯನಾಡಿಗೆ ವ್ಯವಹಾರ ಮತ್ತಿತರ ಕಾರ್ಯಗಳಿಗೆ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪ.ಪೂ. ಕಾಲೇಜಿಗೆ ಮತ್ತು ಹಾಲಿನ ಡಿಪೋಗೆ ಬರುವವರಿಗೆ ಕೆಸರಿಂದಾಗಿ ತೊಂದರೆಯಾಗಿದೆ. ದ್ವಿಚಕ್ರ ಸಹಿತ ಯಾವುದೇ ವಾಹನಗಳು ಸಂಚರಿಸುವಂತಿಲ್ಲ.

Advertisement

ಈ ಬಗ್ಗೆ ಪಿಲಾತಬೆಟ್ಟು ಗ್ರಾ.ಪಂ.ಗೆ ಮನವಿ ನೀಡಿದ್ದು ಸಂಬಂಧಿತರು ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರಿ ಪದವಿಪೂರ್ವ ಕಾಲೇಜಿನ ಮೇಲುಸ್ತುವಾರಿ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನೆಲ್ವಿಸ್ಟರ್‌ ಪಿಂಟೋ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next