Advertisement

ಮಣಿಪಾಲ ಶ್ರೀ ಬಬ್ಬುಸ್ವಾಮಿ ದೈವಸ್ಥಾನ : ಸಿರಿ ಸಿಂಗಾರದ ನೇಮೋತ್ಸವ ಸಂಪನ್ನ

10:37 PM Mar 14, 2021 | Team Udayavani |

ಉಡುಪಿ: ಶ್ರೀ ಬಬ್ಬುಸ್ವಾಮಿ ದೈವವು ಪರಿವಾರ ದೈವಗಳೊಂದಿಗೆ ನೆಲೆಯಾದ “ಮಣಿಪಾಲದ ಜಾಗೃತ ಸ್ಥಾನ’ವೆಂದೇ ಪ್ರಸಿದ್ಧಿಗೊಂಡ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಮಣಿಪಾಲದಲ್ಲಿ ಸಿರಿಸಿಂಗಾರದ ನೇಮೋತ್ಸವ ಸಂಪನ್ನಗೊಂಡಿತು.

Advertisement

ಮಾ. 12ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡ ನೇಮೋತ್ಸವದ ಪ್ರಯುಕ್ತ ರವಿವಾರ ಬೆಳಗ್ಗೆ ಶ್ರೀ ಧೂಮಾವತಿ ಮತ್ತು ಬಂಟ ದೈವದ ನೇಮ, ಮಧ್ಯಾಹ್ನ ಶ್ರೀ ಚಾಮುಂಡಿ, ರಾಹು ಮತ್ತು ಗುಳಿಗ ದೈವಗಳ ನೇಮ, ಸಂಜೆ ಕೊರಗಜ್ಜ ನೇಮ ನಡೆದು, ರಾತ್ರಿ ದೈವದ ಭಂಡಾರ ದೈವಸ್ಥಾನಕ್ಕೆ ಹಿಂದಿರುಗಿತು.

ಕಾರ್ಯಕಾರಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಗುರಿಕಾರರು, ಗ್ರಾಮದ ಹತ್ತು ಸಮಸ್ತರು, ಭಕ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next