Advertisement

ನಿಜವಾದ ಹಿಂದುತ್ವವಿದ್ದರೆ ಜಿನ್ನಾನ ಕೊಲೆ ಮಾಡಬೆಕಾಗಿತ್ತು,ಗಾಂಧಿಯನ್ನಲ್ಲ: ಬಿಕೆ ಹರಿಪ್ರಸಾದ್

02:50 PM Jan 30, 2022 | Team Udayavani |

ಬೆಂಗಳೂರು: ಮಹಾತ್ಮ ಗಾಂಧಿಗಿಂತ ದೊಡ್ಡ ಹಿಂದೂ ಪ್ರಪಂಚದಲ್ಲಿ ಯಾರೂ ಇಲ್ಲ. ಗಾಂಧಿಯವರನ್ನು ಕೊಂದಿದ್ದು ಒಬ್ಬ ಹಿಂದುತ್ವವಾದಿ, ಅವರ ಕೊಲೆ ಮಾಡಿದ್ದು ಮುಸ್ಲಿಂ – ಸಿಖ್ ಅಲ್ಲ, ಹಿಂದುತ್ವವಾದಿಗಳು. ಇವರಿಗೆ ನಿಜವಾದ ಹಿಂದುತ್ವವಿದ್ದರೆ ಜಿನ್ನಾನ ಕೊಲೆ ಮಾಡಬೆಕಾಗಿತ್ತು ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.

Advertisement

ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಂಘ ಪರಿವಾರದ ಸದಸ್ಯರೇ ಇಂಥ ಕೊಲೆಗೆ ನಾಂದಿ ಹಾಕಿಕೊಟ್ಟರು. ಗಾಂಧೀಜಿಯವರ ಪ್ರಗತಿಪರ ಚಿಂತನೆ ವಿರುದ್ದ ಸಂಘ ಪರಿವಾರದವರು ಕೊಲೆ ಮಾಡಿದ್ದು, ಸಂಘ ಪರಿವಾರದವರು ಸಾಮಾಜಿಕ ನ್ಯಾಯ- ಸಂವಿಧಾನ ವಿರೋಧಿಗಳು. ಸಂಘ ಪರಿವಾರದವರು ವೈಜ್ಞಾನಿಕ ಚಿಂತನೆ ವಿರೋಧಿಗಳು. ಸಂಘ ಪರಿವಾರದವರಿಗೆ ದೇಶದ ಬೆಳವಣಿಗೆ ಸಹಿಸಲಿಕ್ಕಾಗದೆ ನಾಥೂರಾಂ ಗೋಡ್ಸೆ ಎಂಬ ಉಗ್ರವಾದಿ ಕೊಲೆ ಮಾಡಿದ್ದಾನೆ ಎಂದರು.

ಇದನ್ನೂ ಓದಿ:ತಹಶೀಲ್ದಾರ್‌ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ನಾವು ದೇಶದ ಮೊಟ್ಟ ಮೊದಲ ಉಗ್ರಗಾಮಿ ಗೋಡ್ಸೆ ಎನ್ನುವುದನ್ನು ಒತ್ತಿ ಒತ್ತಿ ಹೇಳಬೇಕು. ಗಾಂಧಿ ಆದರ್ಶ ಸಿದ್ದಾಂತ ಪ್ರಚಾರ ಮಾಡಿ ಜನರಿಗೆ ತಲುಪಿಸುವ ಜವಾಬ್ದಾರಿ ಕಾಂಗ್ರೆಸ್ ನವರದ್ದು ಎಂದು ಹರಿಪ್ರಸಾದ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next