Advertisement

Ayodhya: ಆಸ್ಪತ್ರೆ ನಿರ್ಮಾಣ ಮುಂದೂಡಿಕೆ

09:23 PM Jul 16, 2023 | Team Udayavani |

ಲಕ್ನೋ: ರಾಮಮಂದಿರ ತೀರ್ಪಿನ ವೇಳೆ ವಕ್ಫ್ ಮಂಡಳಿಗೆ ಮಂಜೂರಾಗಿರುವ ಜಾಗದಲ್ಲಿ ಪ್ರಸ್ತಾಪಿಸಲಾಗಿದ್ದ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ಮುಂದೂಡಿರುವುದಾಗಿ ವಕ್ಫ್ ಮಂಡಳಿ ತಿಳಿಸಿದೆ. ಹಣದ ಕೊರತೆ ಎದುರಾಗಿರುವುದರಿಂದ ಈ ನಿರ್ಣಯ ಕೈಗೊಂಡಿರುವುದಾಗಿಯೂ ಹೇಳಿಕೊಂಡಿದೆ.

Advertisement

2019ರ ತೀರ್ಪಿನಂತೆ ಮಂಜೂರಾಗಿರುವ ಭೂಮಿಯಲ್ಲಿ ಇಂಡೋ-ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಶನ್‌ ಟ್ರಸ್ಟ್‌ ಮಸೀದಿ, ದತ್ತಿ ಆಸ್ಪತ್ರೆ, ಸಮುದಾಯ ಅಡುಗೆ ಮನೆ ನಿರ್ಮಿಸಲು ಉದ್ದೇಶಿಸಿತ್ತು. ಮೊದಲ ಪ್ರಾಶಸ್ತ್ಯವಾಗಿ ಆಸ್ಪತ್ರೆಯ ನಿರ್ಮಾಣಕ್ಕೆ ಕೈ ಇಟ್ಟಿತ್ತು. ಆದರೆ, ಕಾಮಗಾರಿ ಮುಂದುವರಿಸಲು ಹಣದ ಕೊರತೆಯಾಗಿರುವ ಹಿನ್ನೆಲೆ ಸದ್ಯದ ಮಟ್ಟಿಗೆ ಕಾಮಗಾರಿ ಮುಂದೂಡುತ್ತಿದ್ದೇವೆ. ಯೋಜನೆಗಳನ್ನು ಸಣ್ಣದಾಗಿ ಬದಲಿಸಿ, ಬಳಿಕ ಮುಂದುವರಿಸುತ್ತೇವೆ ಎಂದು ಟ್ರಸ್ಟ್‌ ಕಾರ್ಯದರ್ಶಿ ಅತ್ತಾರ್‌ ಹುಸೈನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next