Advertisement

Ayodhya; ಬಿಸಿಲಿನ ಬೇಗೆ ತಣಿಸಲು ಬಾಲಕರಾಮನಿಗೆ ಹತ್ತಿವಸ್ತ್ರ!

12:17 AM Apr 01, 2024 | Team Udayavani |

ಲಕ್ನೋ: ದೇಶದ ಹಲವು ಭಾಗಗಳಲ್ಲಿ ಬಿಸಿಲ ಝಳ ಹೆಚ್ಚಿರುವಂತೆಯೇ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲಕ ರಾಮನ ಬೇಸಗೆ ಆರೈಕೆಯೂ ಆರಂಭಗೊಂಡಿದೆ. ಬೇಗೆ ಹೆಚ್ಚದಿರಲೆಂದು ಬಾಲಕ ರಾಮನಿಗೆ ಹತ್ತಿ ವಸ್ತ್ರಗಳ ಧಾರಣೆ ಮಾಡಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

Advertisement

ಹತ್ತಿ ವಸ್ತ್ರವನ್ನು ಧರಿಸಿರುವ ಬಾಲಕ ರಾಮನ ವಿಗ್ರಹದ ಫೋಟೋವನ್ನು ಜನ್ಮಭೂಮಿ ಟ್ರಸ್ಟ್‌ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಅಲ್ಲದೇ ಪ್ರಭು ರಾಮನಿಗೆ ಧರಿಸಿರುವ ವಸ್ತ್ರವು ಕೈಮಗ್ಗದಲ್ಲಿ ನೇಯ್ದಿರುವ ಮಲ್ಮಲ್‌ ಹತ್ತಿ ಬಟ್ಟೆಯಾಗಿದ್ದು, ನೈಸರ್ಗಿಕ ಬಣ್ಣದಿಂದ ಅದನ್ನು ಅಲಂಕರಿಸಲಾಗಿದೆ. ಜತೆಗೆ ಬಣ್ಣದ ಹೂವಿನ ಬುಟ್ಟಿಗಳಿಂದ ವಸ್ತ್ರವನ್ನು ಅಲಂಕರಿಸಿರುವುದಾಗಿಯೂ ಟ್ರಸ್ಟ್‌ ಮಾಹಿತಿ ನೀಡಿದೆ.

ಇತ್ತೀಚೆಗೆ ಅಯೋಧ್ಯೆಯ ರಾಮ ಮಂದಿರದಲ್ಲಿ ಭವ್ಯವಾಗಿ ಹೋಳಿ ಹಬ್ಬವನ್ನು ಆಚರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next