Advertisement

Ayodhya: ರಾಮನಿಗೆ ಚಿನ್ನದ ರಾಮಚರಿತ ಮಾನಸ ಕೃತಿ

01:58 AM Apr 12, 2024 | Team Udayavani |

ಲಕ್ನೋ: ಹೋಳಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಅಯೋಧ್ಯೆಯ ರಾಮ ಮಂದಿರದಲ್ಲಿ ಇನ್ನೇನು ರಾಮನವಮಿಯ ಸಡಗರ ಆರಂಭವಾಗಲಿದೆ. ಅದಕ್ಕೂ ಮುನ್ನವೇ ಬಾಲಕರಾಮನಿಗೆ 24 ಕ್ಯಾರೆಟ್‌ ಚಿನ್ನದಿಂದ ರಚಿಸಲಾದ 147 ಕೆ.ಜಿ. ತೂಕದ ಚಿನ್ನದ ರಾಮಚರಿತಮಾನಸ ಕೃತಿಯನ್ನು ಸಮರ್ಪಿಸಲಾಗಿದೆ.

Advertisement

ಹೌದು, ಮಂದಿರ ನಿರ್ಮಾಣವಾಗುತ್ತಿದ್ದಂತೆ ಬಾಲಕ ರಾಮನ ಗರ್ಭಗುಡಿಗೆ ಸಮರ್ಪಿಸಲೆಂದು ನಿವೃತ್ತ ಐಎಎಸ್‌ ಅಧಿಕಾರಿ ಸುಬ್ರಹ್ಮಣ್ಯನ್‌ ಲಕ್ಷ್ಮೀನಾರಾಯಣನ್‌ ಸೇರಿ 4.5 ಕೋ.ರೂ. ಮೌಲ್ಯ ದ ರಾಮಚರಿತ ಮಾನಸ ಕೃತಿಯನ್ನು ಉಡುಗೊರೆ ಯಾಗಿ ಮಂದಿರ ಟ್ರಸ್ಟ್‌ಗೆ ನೀಡಿದ್ದರು. 10,902 ಪದ್ಯ ಗಳನ್ನು 522 ಪುಟಗಳಲ್ಲಿ ಚಿನ್ನದಿಂದ ಮುದ್ರಿಸಲಾಗಿದ್ದು, ಇದೀಗ ಆ ಪವಿತ್ರ ಗ್ರಂಥವನ್ನು ದೇಗುಲದ ಗರ್ಭಗುಡಿಯಲ್ಲಿ ಇರಿಸಿರುವುದಾಗಿ ಟ್ರಸ್ಟ್‌ ಹೇಳಿ ದೆ. ಈ ಚಿನ್ನದ ಕೃತಿ ರಚನೆಗೆ 8 ತಿಂಗಳು ತಗುಲಿದೆ.

Advertisement

Udayavani is now on Telegram. Click here to join our channel and stay updated with the latest news.

Next