Advertisement

ಅಯೋಧ್ಯೆ ಭೂ ವಿವಾದ; ಸ್ವಾಮಿ ಅರ್ಜಿ ವಜಾ

02:18 AM Apr 01, 2017 | Team Udayavani |

ಹೊಸದಿಲ್ಲಿ: ಅಯೋಧ್ಯೆಯ ವಿವಾದಿತ ಬಾಬರಿ ಮಸೀದಿ – ರಾಮಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್‌ ಸ್ವಾಮಿ ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ. ‘ಪ್ರಕರಣದಲ್ಲಿ ನಿಮ್ಮ ಮಾನ್ಯತೆ ಏನು? ನಿಮ್ಮನ್ನು ಆಲಿಸುವಷ್ಟು ಸಮಯ ನಮಗಿಲ್ಲ. ಈ ಕೇಸಿನಲ್ಲಿ ನೀವು ಕಕ್ಷಿಯಲ್ಲ ಎಂಬುದನ್ನು ನೀವು ಹೇಳಲೇ ಇಲ್ಲ. ಮಾಧ್ಯಮಗಳ ವರದಿಯಿಂದ ನಮಗೆ ಈ ವಿಚಾರ ಗೊತ್ತಾಯಿತು. ನಾವು ನಿಮ್ಮ ಮನವಿಯನ್ನು ಆಲಿಸುವುದಿಲ್ಲ,’ ಎಂದು ಸಿಜೆಐ ಜೆ.ಎಸ್‌. ಖೇಹರ್‌ ನೇತೃತ್ವದ ಪೀಠ ಹೇಳಿತು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ, ವಿವಾದವು ಆದಷ್ಟು ಬೇಗ ಬಗೆಹರಿಯಲಿ ಎಂಬುದು ನನ್ನ ಆಸೆ. ಅಲ್ಲೊಂದು ದೇವಾಲಯ ನಿರ್ಮಾಣವಾಗಬೇಕು. ಕೇಸು ಇತ್ಯರ್ಥವಾಗದಿರುವ ಕಾರಣ, ಪೂಜಿಸುವ ನನ್ನ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿದೆ. ಅದಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ,’ ಎಂದರು. ಜತೆಗೆ, ‘ನಿಮ್ಮ ಆದೇಶ ನನಗೆ ಖುಷಿ ತಂದಿಲ್ಲ,’ ಎಂದು ಸ್ವಾಮಿ ಹೇಳಿದಾಗ, ಪೀಠವು ‘ಸರಿ, ಖುಷಿ ಪಡಬೇಡಿ’ ಎಂದು ಪ್ರತಿಕ್ರಿಯಿಸಿತು.

Advertisement

Udayavani is now on Telegram. Click here to join our channel and stay updated with the latest news.

Next