Advertisement

Veerendra Heggade: ರಾಜ್ಯಪಾಲರಿಂದ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಪ್ರಶಸ್ತಿ ಪ್ರದಾನ

12:39 PM Nov 09, 2023 | Team Udayavani |

ಬೆಳ್ತಂಗಡಿ: ಸಮಾಜಸೇವಾ ಕ್ಷೇತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾಡಿದ ಅನುಪಮ ಸೇವೆಯನ್ನು ಮನ್ನಿಸಿ ಬೆಂಗಳೂರಿನಲ್ಲಿ ಮಂಗಳವಾರ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ “ಕರ್ನಾಟಕದ ಪರಿವರ್ತನೆಯ ರೂವಾರಿ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

Advertisement

ಡಿ.ಬಿ. ಚಂದ್ರೇಗೌಡ ನಿಧನಕ್ಕೆ ಡಾ| ಹೆಗ್ಗಡೆ, ಪೂಜಾರಿ ಸಂತಾಪ

ಬೆಳ್ತಂಗಡಿ/ಬಂಟ್ವಾಳ: ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ಅವರ ನಿಧನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹಿರಿಯ ಕಾಂಗ್ರೆಸ್‌ ಮುಂದಾಳು ಬಿ. ಜನಾರ್ದನ ಪೂಜಾರಿ ಸಂತಾಪ ಸೂಚಿಸಿದ್ದಾರೆ.

ಚಂದ್ರೇಗೌಡರು ಉತ್ತಮ ಸೇವೆ ನೀಡಿದ್ದಾರೆ. ಧರ್ಮಸ್ಥಳದ ಭಕ್ತರೂ ಆಗಿದ್ದ ಅವರು ನಮ್ಮ ಕಾರ್ಯಕ್ರಮ ಗಳಿಗೆ ಸಕ್ರಿಯ ಸಹಕಾರ ನೀಡಿದ್ದಾರೆ ಎಂದು ಡಾ| ಹೆಗ್ಗಡೆ ಸ್ಮರಿಸಿದ್ದಾರೆ. ಚಂದ್ರೇಗೌಡರ ನಿಧನದಿಂದ ಇಡೀ ದೇಶಕ್ಕೆ ನಷ್ಟವಾಗಿದೆ. ಬಂಗಾರದಂತಹ ವ್ಯಕ್ತಿತ್ವದ ಅವರು ಇಂದಿರಾ ಗಾಂಧಿ, ದೇವರಾಜ ಅರಸು ಕಾಲಘಟ್ಟದಲ್ಲಿ ಸನ್ನಡತೆಯ ರಾಜಕಾರಣದ ಮೂಲಕ ಮಾದರಿಯಾಗಿದ್ದರು ಎಂದು ಪೂಜಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next