Advertisement

ಅವರಾದ: 11,000 ಮಾಸ್ಕ್ ‌ ವಿತರಣೆ

03:36 PM May 14, 2020 | Naveen |

ಕಲಬುರಗಿ: ಕೋವಿಡ್‌ -19 ನಿಯಂತ್ರಣ ಮಾಡುವಲ್ಲಿ ಸಾಮಾಜಿಕ ಅಂತರ ಕಾಪಾಡುವುದೇ ಬಹು ಮುಖ್ಯವಾಗಿದೆ ಎಂದು ಅವರಾದ ಜಿಪಂ ಕ್ಷೇತ್ರದ ಸದಸ್ಯೆ ವಿಜಯಲಕ್ಷ್ಮೀ ಎಸ್‌. ಹಾಗರಗಿ ಹೇಳಿದರು.

Advertisement

ತಾಲೂಕಿನ ಅವರಾದ ಜಿಪಂ ಕ್ಷೇತ್ರದಲ್ಲಿ ಮಾಸ್ಕ್ ವಿತರಿಸಿ ಅವರು ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಗುಂಡೇರಾವ ಹಾಗರಗಿ, ಕಾಂಗ್ರೆಸ್‌ ಪಕ್ಷದ ಮುಖಂಡರಾದ ವಿಜಯಕುಮಾರ ಜಿ. ರಾಮಕೃಷ್ಣ ಅವರ ಸಲಹೆ ಹಾಗೂ ಇಚ್ಚೆ ಮೇರೆಗೆ ಅವರಾದ ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿ 11000 ಮಾಸ್ಕ್ ವಿತರಿಸಿ ಗ್ರಾಮೀಣ ಜನರಲ್ಲಿ ಕೋವಿಡ್ ವೈರಸ್‌ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಜನರಿಗೆ ಉದ್ಯೋಗಾವಕಾಶ ದೊರೆಯುವ ನಿಟ್ಟಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಅವರಾದ ಗ್ರಾಮದಲ್ಲಿ ಮುಖಂಡರಾದ ವಿಜಯಕುಮಾರ ರಾಮಕೃಷ್ಣ ಮಾಸ್ಕ್ ವಿತರಣೆಗೆ ಚಾಲನೆ ನೀಡಿದರು. ಮುಖಂಡರಾದ ಶರಣಬಸಪ್ಪ ಹಾಗರಗಿ, ವಿಠ್ಠಲ ಕಾಂಬ್ಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next