Advertisement

3000 ರೂ.ಗಾಗಿ ಇಬ್ಬರ ಮೇಲೆ ತಡರಾತ್ರಿ ಕಲ್ಲುಗಳಿಂದ ಹಲ್ಲೆ: ಓರ್ವ ಸಾವು

09:40 AM Dec 24, 2021 | Team Udayavani |

ಹೊಸದಿಲ್ಲಿ: ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ದೆಹಲಿಯಲ್ಲಿ ಡಿಸೆಂಬರ್ 20 ರ ರಾತ್ರಿ ನಡೆದಿದೆ. ಘಟನೆಯ ಸಿಸಿಟಿವಿ ವೀಡಿಯೋ ಫೂಟೇಜ್‌ನಲ್ಲಿ ಗುಂಪೊಂದು ಇಬ್ಬರ ಮೇಲೆ ದಾಳಿ ಮಾಡಿ, ದೊಡ್ಡ ಕಲ್ಲುಗಳಿಂದ ಹೊಡೆದು, ಹತ್ತಿರದ ಚರಂಡಿಗೆ ಎಳೆದುಕೊಂಡು ಹೋಗುವುದು ತೋರುತ್ತದೆ.

Advertisement

ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಗಾಯಗೊಂಡವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ದಾಳಿಗೆ ಒಳಗಾದ ಇಬ್ಬರನ್ನು ಪಂಕಜ್ ಮತ್ತು ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುವ 21 ವರ್ಷದ ಜತಿನ್ ಎಂದು ಗುರುತಿಸಲಾಗಿದೆ.

ಕನಿಷ್ಠ ಏಳು ಮಂದಿ ಯಾವುದೇ ಸ್ಪಷ್ಟ ಪ್ರಚೋದನೆಯಿಲ್ಲದೆ ಇಬ್ಬರನ್ನು ಕ್ರೂರವಾಗಿ ಥಳಿಸುವುದನ್ನು ಕಾಣಬಹುದು. ದಾಳಿಕೋರರು ಭಾರವಾದ ಕಲ್ಲುಗಳಿಂದ ಹೊಡೆದು ಅವರ ಜರ್ಜರಿತ ದೇಹಗಳನ್ನು ಚರಂಡಿಗೆ ಎಸೆದು ಹೊರಟುಹೋದರು.

ಇದನ್ನೂ ಓದಿ:ಬೇಡಿಕೆ ಕುದುರಿಸಿಕೊಂಡ 500, 2 ಸಾವಿರ ನೋಟು; ಕೇಂದ್ರ ಸರಕಾರದಿಂದಲೇ ಈ ಬಗ್ಗೆ ಮಾಹಿತಿ

ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸ್ನೇಹಿತರೊಬ್ಬರ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಹಿಂತಿರುಗುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ತಡೆದ ಕೆಲವರು ತಮ್ಮ ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಒತ್ತಾಯಿಸಿದರು. ಅವರು ನಿರಾಕರಿಸಿದಾಗ, ದಾಳಿಕೋರರು ಅವರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ಆರೋಪಿಗಳು ಪಂಕಜ್ ಬಳಿ ತೆಗೆದುಕೊಂಡು ಹೋಗದೆ ಜತಿನ್ ಜೇಬಿನಲ್ಲಿದ್ದ 3 ಸಾವಿರ ರೂ. ದೋಚಿದ್ದಾರೆ.

Advertisement

ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದು, ಆದರೆ ಜತಿನ್ ಸಾವನ್ನಪ್ಪಿದ್ದಾರೆ. ಸಂಗಮ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಬ್ಬ ಆರೋಪಿ ಸಂಗಮ್ ವಿಹಾರ್ ನಿವಾಸಿ ರಾಮ್‌ಜನ್ ಅಲಿಯನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಉಪ ಆಯುಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next