Advertisement

ಎಟಿಎಂ ಯಂತ್ರ ಕತ್ತರಿಸಿ 17.50 ಲಕ್ಷ ರೂ. ಹಣ ದರೋಡೆ

03:56 PM May 23, 2021 | Team Udayavani |

ಮಂಡ್ಯ: ಲಾಕ್ ಡೌನ್ ಅನ್ನು ಬಂಡವಾಳವಾಗಿ ಮಾಡಿಕೊಂಡ ಕಳ್ಳರು, ಎಟಿಎಂ ಯಂತ್ರ ಕತ್ತರಿಸಿ 17.50 ಲಕ್ಷ ರೂ. ಹಣ ದರೋಡೆ ಮಾಡಿರುವ ಘಟನೆ ಮದ್ದೂರು ಪಟ್ಟಣದ ಕೊಲ್ಲಿ ಸರ್ಕಲ್ ನಲ್ಲಿ ನಡೆದಿದೆ.

Advertisement

ಎಟಿಎಂ ಕೇಂದ್ರದಲ್ಲಿ ಕಾವಲುಗಾರ ಇಲ್ಲದಿರುವುದನ್ನೆ ಅವಕಾಶ ಮಾಡಿಕೊಂಡ ದುಷ್ಕರ್ಮಿಗಳು, ಗ್ಯಾಸ್ ಕಟ್ಟರ್ ನಿಂದ ಎಟಿಎಂ ಯಂತ್ರವನ್ನು ತುಂಡರಿಸಿ ದರೋಡೆ ಮಾಡಿದ್ದಾರೆ.

ಸುಮಾರು 17.50 ಲಕ್ಷಕ್ಕೂ ಹೆಚ್ಚಿನ ಹಣ ದೋಚಿರುವ ಕಳ್ಳರು, ಸಿ‌ಸಿಟಿವಿ ಕ್ಯಾಮೆರಾಗಳನ್ನು ಗ್ಯಾಸ್ ಕಟ್ಟರ್ ನಿಂದ ಸುಟ್ಟಿದ್ದಾರೆ. ಸ್ಥಳಕ್ಕೆ ಎಸ್ಪಿ ಅಶ್ವಿನಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

ನಂತರ ಮಾತನಾಡಿ, ಮಳವಳ್ಳಿ ಡಿವೈಎಸ್ಪಿ ಲಕ್ಷ್ಮಿ ನಾರಾಯಣ್ ಪ್ರಸಾದ್ ರವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದರು. ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next