Advertisement

ಡಿ.25; ಅಟಲ್‌ ಉತ್ಸವ: ವಿಜಯ ಪ್ರಕಾಶ್‌ರಿಂದ ಸಂಗೀತ ರಸಮಂಜರಿ

03:07 PM Dec 25, 2022 | Team Udayavani |

ಉಡುಪಿ: ಭಾರತರತ್ನ ಅಟಲ್‌ ಬಿಹಾರಿ ವಾಜಪೇಯಿಯವರ 98ನೇ ಜನ್ಮದಿನದ ಪ್ರಯುಕ್ತ ಬಿಜೆಪಿ ಉಡುಪಿ ನಗರ ಮತ್ತು ಗ್ರಾಮಾಂತರ ವತಿಯಿಂದ ಎಂಜಿಎಂ ಕಾಲೇಜು ಮೈದಾನದಲ್ಲಿ “ಅಟಲ್‌ ಉತ್ಸವ’ದ ಪ್ರಯುಕ್ತ ಡಿ. 25ರಂದು ವಿನೂತನ ಕಾರ್ಯಕ್ರಮವಾಗಿ ಸಂಜೆ 4ಗಂಟೆಗೆ ಬೂತ್‌ ಸಂಗಮ ಸಮಾವೇಶ ನಡೆಯಲಿದೆ.
ಬೂತ್‌ ಸಮಾವೇಶದ ಅನಂತರ ಗಾಯಕ ವಿಜಯ ಪ್ರಕಾಶ್‌ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ.

Advertisement

ಪ್ರಸಿದ್ಧ ಚಲನಚಿತ್ರ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್‌ ನೇತೃತ್ವದ ತಂಡದಿಂದ ಸಂಗೀತ ರಸ ಮಂಜರಿ ನಡೆಯಲಿದ್ದು, ಪ್ರಸಿದ್ಧ ಹಿನ್ನೆಲೆ ಗಾಯಕಿಯರಾದ ಅನುರಾಧಾ ಭಟ್‌, ಐಶ್ವರ್ಯಾ ರಂಗರಾಜನ್‌, ಸರಿಗಮಪ ರಿಯಾಲಿಟಿ ಶೋ ವಿಜೇತ ಯುವ ಗಾಯಕರಾದ ಇಂಚರಾ, ನಿಶಾನ್‌ ರೈ, ವಿಶಾಖ್‌ ನಾಗಲ್ಪುರ್‌ ಭಾಗವಹಿಸುವರು.

ಉಡುಪಿಯಲ್ಲಿ ಪ್ರಥಮ ಬಾರಿಗೆ ವಿಜಯ ಪ್ರಕಾಶ್‌ ಅವರಿಂದ ಸಂಗೀತ ರಸ ಮಂಜರಿ ನಡೆಯಲಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಸಂಗೀತಾಸಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಬಿಜೆಪಿ ನಗರ ಅಧ್ಯಕ್ಷ ಮಹೇಶ್‌ ಠಾಕೂರ್‌ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next